ರೇಷನ್ ಕಾರ್ಡ್ ತಿದ್ದುಪಡಿ ಕಾಲಾವಕಾಶ ವಿಸ್ತರಣೆ:

 

 

ಬೆಳ್ತಂಗಡಿ: ಪಡಿತರ ಚೀಟಿ (ರೇಷನ್ ಕಾರ್ಡ್) ತಿದ್ದುಪಡಿ ಕಾಲಾವಕಾಶ ವಿಸ್ತರಿಸಲಾಗಿದೆ. ಸರ್ಕಾರ ಕಾರ್ಡ್ ತಿದ್ದುಪಡಿಗಾಗಿ  ಅವಕಾಶ ಕಲ್ಪಿಸಿದರೂ ಸರ್ವರ್ ಸಮಸ್ಯೆಯಿಂದಾಗಿ ತೊಂದರೆಯಾಗಿತ್ತು. ಈ ಹಿನ್ನೆಲೆಯಲ್ಲಿ ಆಗಸ್ಟ್ 23 ರಂದು ಒಂದು ದಿನ ಹಾಗೂ ಮತ್ತೆ ಸಪ್ಟೆಂಬರ್ 01 ರಿಂದ 10 ರ ವರೆಗೆ ಅವಕಾಶವನ್ನು ಆಹಾರ ಇಲಾಖೆ ಆದೇಶಿಸಿದೆ.ಅದಲ್ಲದೇ ತುರ್ತು ಚಿಕಿತ್ಸೆಗಾಗಿ ಬಿಪಿಎಲ್ ಕಾರ್ಡ್ ನಲ್ಲಿ ಹೆಸರು ಸೇರಿಸುವಂತಹ ಅರ್ಜಿಗಳ ವಿಲೇವಾರಿ ಮಾಡುವುದಕ್ಕಾಗಿ ಆಗಸ್ಟ್ 25 ರಂದು ಆಹಾರ ನಿರೀಕ್ಷಕರಿಗೆ ಅವಕಾಶ ನೀಡಲಾಗಿದೆ.ಸೆ 01 ರಿಂದ 10 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ಪಡಿತರ ಚೀಟಿ ತಿದ್ಸುಪಡಿಗೆ ಅರ್ಜಿ ಸಲ್ಲಿಸಬಹುದು.ಹಾಗೂ ಆಹಾರ ನಿರೀಕ್ಷಕರು ಇದನ್ನು ಅನುಮೋದಿಸಬಹುದು ಎಂದು ತಿಳಿಸಲಾಗಿದೆ.

error: Content is protected !!