ರಸ್ತೆ ಬದಿ ಕಸ ಎಸೆದವರಿಂದಲೇ ಕಸ ಹೆಕ್ಕಿಸಿ ದಂಡ..!: ಮಾಲಾಡಿ ಗ್ರಾಮ ಪಂಚಾಯತ್ ಅಧಿಕಾರಿಗಳಿಂದ ಪರಸರ ಜಾಗೃತಿ

ಬೆಳ್ತಂಗಡಿ: ರಸ್ತೆ ಬದಿ ಕಸ ಎಸೆದವರನ್ನು ತಡೆದು ಅವರಿಂದಲೇ ಕಸ ಹೆಕ್ಕಿಸಿ ದಂಡ ವಿಧಿಸಿದ ಘಟನೆ ಮಾಲಾಡಿ ಗ್ರಾಮದಲ್ಲಿ ನಡೆದಿದೆ.

ಜು.06ರಂದು ಸಂಜೆ ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಪೆದಬೈಲು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಪಕ್ಕ ವಾಹನದಲ್ಲಿ ತಂದು ಕಸ ತುಂಬಿದ ಗೋಣಿ ಚೀಲಗಳನ್ನು ಎಸೆಯುತ್ತಿದ್ದವರನ್ನು ಸ್ಥಳೀಯರು ನೀಡಿದ ಮಾಹಿತಿಯಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಾದ ರಾಜಶೇಖರ ರೈ, ಕಾರ್ಯದರ್ಶಿ ಯಶೋಧರ ಶೆಟ್ಟಿ, ಉಪಾಧ್ಯಕ್ಷರಾದ, ದಿನೇಶ್.ಡಿ.ಕರ್ಕೇರ ಹಾಗೂ ಸಿಬ್ಬಂದಿ ಮಹಮ್ಮದ್ ಲತೀಫ್‌ರವರು ತಡೆದು ನಿಲ್ಲಿಸಿ ಕಸ ಎಸೆದವರಿಂದಲೇ ಕಸ ಹೆಕ್ಕಿಸಿದ್ದಲ್ಲದೇ ರೂ.5000/- ದಂಡ ವಿಧಿಸಿದ್ದಾರೆ.

error: Content is protected !!