ಬತ್ತಿದ್ದ ನೇತ್ರಾವತಿಗೆ ವರುಷಧಾರೆಯಿಂದ ಜೀವಕಳೆ..

 

ಧರ್ಮಸ್ಥಳ: ಸುಡುಬಿಸಿಲಿನ ಬೇಗೆಗೆ ಬತ್ತಿದ್ದ ನೇತ್ರಾವತಿ ನದಿಗೆ ಮತ್ತೆ ಜೀವಕಳೆ ಬಂದಿದೆ. ಮಳೆಗಾಲ ಆರಂಭವಾಗಿ ಕೆಲವಷ್ಟು ದಿನ ಸುರಿದ ವರುಷಧಾರೆಯಿಂದ ನದಿಯಲ್ಲಿ ನೀರಿನ ಮಟ್ಟ ಏರಿಕೆ ಕಂಡಿದೆ.

ತಾಲೂಕಿನ ಎಲ್ಲಾ ನದಿಗಳು ಕಳೆದ ಎರಡು ತಿಂಗಳಿನಿಂದ ಬಿರು ಬಿಸಿಲಿನಿಂದಾಗಿ ಬತ್ತಿ ಮೈದಾನದಂತಾಗಿದ್ದು, ಈ ಬಾರಿಯೂ ಜೂನ್ ತಿಂಗಳಲ್ಲಿ ಮಳೆ ಬಾರದಿದ್ದುದರಿಂದ ಜೂನ್ ಕೊನೆಯ ವಾರದವರೆಗೂ ನದಿಯಲ್ಲಿ ಒಂದು ಹನಿ ನೀರಿಲ್ಲದ ಸ್ಥಿತಿ ನಿರ್ಮಾಣವಾಗಿತ್ತು. ಜೂ.27ರಿಂದ ಸುರಿದ ಮಳೆಯಿಂದಾಗಿ ನೀರಿನ ಹರಿವು ಪ್ರಾರಂಭವಾಗಿ ನೀರಿನ ಮಟ್ಟ ಏರಿಕೆ ಕಂಡಿದೆ.

error: Content is protected !!