ಗುರುವಾಯನಕೆರೆ: ಅಂಗಡಿ ಮಾಲಕನಿಂದ ಯುವಕನಿಗೆ ಹಲ್ಲೆ: ಗಾಯಗೊಂಡ ಯುವಕ ಆಸ್ಪತ್ರೆಗೆ ದಾಖಲು:

 

 

 

ಬೆಳ್ತಂಗಡಿ:  ಯುವಕನೊಬ್ಬನಿಗೆ  ಅಂಗಡಿ ಮಾಲಕ ಹಲ್ಲೆ ನಡೆಸಿದ ಘಟನೆ ಮೇ.19ರಂದು ಗುರುವಾಯನಕೆರೆಯಲ್ಲಿ ನಡೆದಿದೆ.

ಗುರುವಾಯನಕೆರೆ ಸುಪ್ರಿಮ್ ಎಲೆಕ್ಟ್ರಾನಿಕ್ಸ್ ಅಂಗಡಿ ಮಾಲಕ ಝಬೈರ್ ಖಾಸಗಿ  ಕಂಪನಿಯ ಉದ್ಯೋಗಿಯೊಬ್ಬರಿಗೆ ಹಲ್ಲೆ ನಡೆಸಿದ್ದು ಯುವಕ ಬೆಳ್ತಂಗಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಖಾಸಗಿ ಪೈನಾನ್ಸ್ ನ ಉದ್ಯೋಗಿ ಪ್ರಶಾಂತ್ ಎಲೆಕ್ಟ್ರಾನಿಕ್ಸ್ ವಸ್ತುವೊಂದರ ಲಾಗಿನ್ ಮಾಡಲೆಂದು ಗುರುವಾಯನಕೆರೆಯಲ್ಲಿರುವ ಝುಬೈರ್ ಅವರ ಮಾಲಕತ್ವದ ಸುಪ್ರಿಮ್ ಎಲೆಕ್ಟ್ರಾನಿಕ್ಸ್ ಗೆ ತೆರಳಿದ್ದು ಈ ಸಂದರ್ಭದಲ್ಲಿ ಅಂಗಡಿಯಲ್ಲಿ ಕೆಲಸ ನಿರ್ವಹಿಸುತಿರುವ ಸಿಬ್ಬಂದಿಯೊಂದಿಗೆ ಮಾತನಾಡಿದ ಎಂಬ ಕಾರಣವೊಡ್ಡಿ ಮಾಲಕ ಝುಬೈರ್ ಹಲ್ಲೆ ಮಾಡಿರುವುದಾಗಿ ತಿಳಿದು ಬಂದಿದೆ. ಹಲ್ಲೆಗೊಳಗಾದ ಯುವಕ ಬೆಳ್ತಂಗಡಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!