‘ನನ್ನ ವಿಚಾರಕ್ಕೆ ಬಂದರೆ ನಿಮ್ಮ ಜಾತಕ ಬಿಚ್ಚಿಡುತ್ತೇನೆ: ನನ್ನನ್ನು ಕೆಣಕಿದರೆ ನಾನು ಕೆದಕುತ್ತೇನೆ: ಪ್ರತಾಪ ಸಿಂಹ ನಾಯಕ್ ವಿರುದ್ಧ ಮಾಜಿ ಶಾಸಕ ಕೆ.ವಸಂತ ಬಂಗೇರ ಕಿಡಿ..!

ಬೆಳ್ತಂಗಡಿ: ನನ್ನ ವಿಚಾರಕ್ಕೆ ಬಂದರೆ ನಿಮ್ಮ ವಿಚಾರ ಬಿಚ್ಚಿಡುತ್ತೇನೆ. ನಿಮ್ಮ ಎಲ್ಲಾ ಜಾತಕ ಬಿಡಿಸುತ್ತೇನೆ ಎಂದು ಮಾಜಿ ಶಾಸಕ ಕೆ ವಸಂತ ಬಂಗೇರ ಅವರು ಎಂ,ಎಲ್,ಸಿ ಪ್ರತಾಪ ಸಿಂಹ ನಾಯಕ್ ವಿರುದ್ಧ ಕಿಡಿಕಾರಿದ್ದಾರೆ.

ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ವಸಂತ ಬಂಗೇರ ಏನು ಮಾಡಿದ್ದಾರೆ ಎಂದು ಪ್ರಶ್ನಿಸುವ ಹಕ್ಕು ಇವರಿಗಿಲ್ಲ. ಮಾಹಿತಿ ಹಕ್ಕಿಗೆ ಅರ್ಜಿ ಹಾಕಿ, ಅಲ್ಲಿ ಲೆಕ್ಕ ಇದೆ. ಇವರ ತಂದೆಯ ಬಗ್ಗೆ ಮಾತನಾಡಲು ಗೊತ್ತು, ಪ್ರತಾಪ ಸಿಂಹ ನಾಯಕ್ ಬಗ್ಗೆ ಮಾತನಾಡಲು ಗೊತ್ತು. ನಿಮ್ಮ ಎಲ್ಲಾ ಜಾತಕ ಬಿಡಿಸುತ್ತೇನೆ. ಆದರೆ ಕುಟುಂಬದ ಮಾನ ಹಾನಿ ಮಾಡುವ ಕೆಲಸ ಮಾಡುವುದಿಲ್ಲ. ನನ್ನ ವಿಚಾರಕ್ಕೆ ಬಂದರೆ ನಿಮ್ಮ ವಿಚಾರ ಬಿಚ್ಚಿಡುತ್ತೇನೆ. ನನ್ನನ್ನು ಕೆಣಕಿದರೆ ನಾನು ಕೆದಕುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಬಿಜೆಪಿ ಆಡಳಿದ ಬಗ್ಗೆ ಮಾತನಾಡಿದ ಅವರು, ಬಿಜೆಪಿ ಕೇಂದ್ರ ಹಾಗೂ ರಾಜ್ಯಕ್ಕೆ ಬಂದ್ದದೇ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲು. ಶಾಲಾ ಮಕ್ಕಳಿಗೆ ಸಮವಸ್ತ್ರ ಇಲ್ಲ, ಉಚಿತ ಪುಸ್ತಕ, ಸೈಕಲ್, ರೈತರಿಗೆ ಹಾಲಿನ ಸಬ್ಸಿಡಿ ಇಲ್ಲದಂತಾಗಿದೆ. ಗಗನಕ್ಕೇರಿದ ಬೆಲೆಯಿಂದ ಮೆಣಸು ಭಾರೀ ಖಾರ ಆಗಿದೆ ಎಂದರು.

error: Content is protected !!