ಬೆಳ್ತಂಗಡಿ: ಎ 17 ವಿವಿಧ ಪಕ್ಷಗಳ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ: ಅತ್ಯಧಿಕ ಜನ ಸಂದಣಿ ಸೇರುವ ಸಂಭವ:ಕಡೂರು, ಬಂಟ್ವಾಳ ವಾಹನ ಸಂಚಾರದ ಮಾರ್ಗ ಬದಲಾವಣೆ: ಕೊಯ್ಯೂರು ಕ್ರಾಸ್ ಮೂಲಕ ಗೇರುಕಟ್ಟೆ ಸಂಚಾರಕ್ಕೆ ಡಿ.ಸಿ. ಆದೇಶ:

 

 

 

ಬೆಳ್ತಂಗಡಿ: ವಿಧಾನ ಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಎ 17 ರಂದು ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರಗಳ ಬಿಜೆಪಿ, ಕಾಂಗ್ರೆಸ್, ಎಸ್ ಡಿ ಪಿ ಐ, ಸೇರಿದಂತೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಒಂದೇ ದಿನ ನಾಮ ಪತ್ರ ಸಲ್ಲಿಸಲಿದ್ದು ಈ ಸಂದರ್ಭದಲ್ಲಿ ಜನ ಸಂದಣಿ ಹೆಚ್ಚಿರುವ ಕಾರಣಕ್ಕಾಗಿ ವಾಹನ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಡೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ಎಲ್ಲಾ ವಾಹನಗಳನ್ನು ಎ 17 ಸೋಮವಾರ ಬೆಳಿಗ್ಗೆ 9 ರಿಂದ ಸಂಜೆ 5 ಗಂಟೆಯವರೆಗೆ ಸಂಚಾರದ ಮಾರ್ಗವನ್ನು ಕೊಯ್ಯೂರು ಕ್ರಾಸ್ ನಿಂದಾಗಿ ಆದೂರ್ ಪೆರಲ್, ಪರಪ್ಪು ಮೂಲಕ ಗೇರುಕಟ್ಟೆ ಸಂಪರ್ಕ ರಸ್ತೆಗೆ ಬದಲಾಯಿಸಲಾಗಿದೆ.ಗೇರುಕಟ್ಟೆಯಿಂದ ಗುರುವಾಯನಕೆರೆ ಮೂಲಕ ಮಂಗಳೂರು ಸಂಚಾರಿಸಬಹುದು.

 

 

 

 

ಈ ಬಗ್ಗೆ  ಬೆಳ್ತಂಗಡಿ ತಹಶೀಲ್ದಾರ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದರು ಜಿಲ್ಲಾಧಿಕಾರಿಗಳು  ಪರಿಶೀಲಿಸಿದ  ವಾಹನ ಸಂಚಾರದ ಮಾರ್ಗ ಬದಲಾಯಿಸುವಂತೆ ಆದೇಶಿಸಿದ್ದಾರೆ ಎಂದು ತಿಳಿದು ಬಂದಿದೆ.

error: Content is protected !!