ಕರ್ನಾಟಕ ವಿಧಾನ ಸಭಾ ಚುನಾವಣೆ 2023 ಬಿಜೆಪಿ ಮೊದಲ ಪಟ್ಟಿ ಬಿಡುಗಡೆ: ಬೆಳ್ತಂಗಡಿಗೆ ಹರೀಶ್ ಪೂಂಜ, ಪುತ್ತೂರಿಗೆ ಆಶಾ ತಿಮ್ಮಪ್ಪ ಗೌಡ…!

 

 

 

 

ಬೆಳ್ತಂಗಡಿ :ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 8 ಕ್ಷೇತ್ರಗಳ ಪೈಕಿ ಎಲ್ಲಾ ಕ್ಷೇತ್ರದ ಅಭ್ಯರ್ಥಿಗಳಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್​ ಘೋಷಣೆಯಾಗಿದೆ. ಬೆಳ್ತಂಗಡಿ ಕ್ಷೇತ್ರದಲ್ಲಿ ಹಾಲಿ ಶಾಸಕ ಹರೀಶ್​ ಪೂಂಜಾ ಟಿಕೆಟ್​ ಪಡೆದುಕೊಂಡಿದ್ದಾರೆ. ಬಂಟ್ವಾಳದಲ್ಲಿ ರಾಜೇಶ್​ ನಾಯ್ಕ್​, ಮಂಗಳೂರು ಉತ್ತರ ಭರತ್​ ಶೆಟ್ಟಿ, ಮಂಗಳೂರು ದಕ್ಷಿಣ ವೇದವ್ಯಾಸ ಕಾಮತ್​, ಮೂಡಬಿದಿರೆ ಉಮಾನಾಥ ಕೋಟ್ಯಾನ್​ , ಮಂಗಳೂರು ಕ್ಷೇತ್ರದಲ್ಲಿ ಸತೀಶ್​ ಕುಂಪಲ, ಪುತ್ತೂರಿನಿಂದ ಆಶಾ ತಿಮ್ಮಪ್ಪ ಗೌಡ, ಸುಳ್ಯದಿಂದ ಭಾಗೀರಥಿ ಮುರುಳ್ಯ ಟಿಕೆಟ್​ ಪಡೆದುಕೊಂಡಿದ್ದಾರೆ.

 

 

ಉಡುಪಿ ಜಿಲ್ಲೆಯ ಒಟ್ಟು 5 ಕ್ಷೇತ್ರದ ಅಭ್ಯರ್ಥಿಗಳ ಪೈಕಿ ಮೊದಲ ಪಟ್ಟಿಯಲ್ಲಿ 4 ಸ್ಥಾನ ದೊರಕಿದೆ. ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಿರಣ್​ ಕೊಡ್ಗಿ, ಕಾರ್ಕಳ ಸುನೀಲ್​ ಕುಮಾರ್​ , ಕಾಪು ಸುರೇಶ್​ ಶೆಟ್ಟಿ ಗುರ್ಮೆ, ಉಡುಪಿಯಲ್ಲಿ ಯಶಪಾಲ್​ ಸುವರ್ಣರಿಗೆ ಟಿಕೆಟ್​ ಘೋಷಣೆಯಾಗಿದೆ.

ಇನ್ನುಳಿದಂತೆ ಶಿಗ್ಗಾವಿ ಬಸವರಾಜ ಬೊಮ್ಮಾಯಿ, ನರಗುಂದ – ಸಿಸಿ ಪಾಟೀಲ್​, ಧಾರವಾಡ – ಅಮೃತ ದೇಸಾಯಿ, ಹಿರೇಕೇರೂರು – ಬಿ.ಸಿ ಪಾಟೀಲ್​, ಬಳ್ಳಾರಿ ಗ್ರಾಮೀಣ ಶ್ರೀರಾಮುಲು, ಶಿರಸಿ ವಿಶ್ವೇಶ್ವರ ಹೆಗಡೆ ಕಾಗೇರಿ, ಮುಧೋಳ – ಗೋವಿಂದ ಕಾರಜೋಳ, ಶಿಕಾರಿಪುರ – ಬಿ.ವೈ ವಿಜಯೇಂದ್ರ,ಪದ್ಮನಾಭನಗರ ಹಾಗೂ ಕನಕಪುರದಿಂದ ಆರ್​.ಅಶೋಕ್​ ಗೆ ಟಿಕೆಟ್​ ಸಿಕ್ಕಿದೆ. ಕನಕಪುರದಲ್ಲಿ ಡಿಕೆಶಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಲುವಾಗಿ ಆರ್​.ಅಶೋಕ್​ ಈ ಬಾರಿ ಕನಕಪುರದಿಂದಲೂ ಸ್ಪರ್ಧೆ ಮಾಡಲಿದ್ದಾರೆ.

ಈ ಬಾರಿ ಬಿಜೆಪಿಯು 52 ಹೊಸ ಮುಖಗಳಿಗೆ ಅವಕಾಶ ನೀಡಿದೆ. ಬಿಜೆಪಿ ಅಭ್ಯರ್ಥಿಗಳ ಪಟ್ಟಿಯಲ್ಲಿ 8 ಮಹಿಳೆಯರಿಗೆ ಅವಕಾಶ ನೀಡಲಾಗಿದೆ. ಹಿಂದುಳಿದ ರವರ್ಗ 32, ಎಸ್ಸಿ 30 ಹಾಗೂ ಎಸ್ಟಿ ಸಮುದಾಯದ 16 ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ.

error: Content is protected !!