ದೇಗುಲಗಳಲ್ಲಿ ರಾಜಕೀಯ ಕೊನೆಯಾಗಲಿ: ಬ್ರಹ್ಮ ಕಲಶೋತ್ಸವ ಸಂದರ್ಭದಲ್ಲಿ ಹಿಂದೂ ನಾಯಕರ ಕಡೆಗಣನೆ ಖಂಡನೀಯ: ಪತ್ರಿಕಾಗೋಷ್ಠಿಯಲ್ಲಿ ಅಸಾಮಾಧಾನ ಹೊರಹಾಕಿದ ಹಿಂದೂ ಮುಖಂಡ ಮಹೇಶ್ ಶೆಟ್ಟಿ ತಿಮರೋಡಿ:

 

 

 

ಬೆಳ್ತಂಗಡಿ: ತಾಲೂಕಿನ ದೇವಸ್ಥಾನಗಳ ಬ್ರಹ್ಮಕಲಶದ ಸಂದರ್ಭದಲ್ಲಿ ಹಿಂದೂ ನಾಯಕರುಗಳನ್ನು
ಕಡೆಗಣನೆ ಮಾಡುತ್ತಿರುವುದು ಹಾಗೂ ರಾಜಕೀಯ ಮಾಡುತ್ತಿರುವುದು ಖಂಡನೀಯ ಎಂದು ರಾಷ್ಟ್ರೀಯ ಹಿಂದೂ ಜಾಗರಣಾ ವೇದಿಕೆಯ ಸಂಸ್ಥಾಪಕ ಮಹೇಶ್ ಶೆಟ್ಟಿ ತಿಮರೋಡಿ ಹೇಳಿದರು. ಅವರು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ದೇವಸ್ಥಾನಗಳು ಪ್ರತಿಯೊಬ್ಬ ಹಿಂದೂವಿನ ಧಾರ್ಮಿಕ ಶೃದ್ಧಾ ಕೇಂದ್ರವಾಗಿದ್ದು ಪ್ರತಿಯೊಬ್ಬ
ಹಿಂದೂ ಬಂಧುಗಳಿಗೂ ಮುಕ್ತ ಅವಕಾಶವಿದೆ ಎಂಬುದು ಪ್ರತಿಯೊಬ್ಬರಿಗೂ ತಿಳಿದಿರುವ ವಿಚಾರ ಮತ್ತು
ಸತ್ಯ ಅದರೆ ಕಳೆದ ಕೆಲವು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನಲ್ಲಿ ಅನೇಕ ದೇವಸ್ಥಾನಗಳಲ್ಲಿ
ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಹೆಚ್ಚಿನ ದೇವಸ್ಥಾನಗಳಲ್ಲಿ ತಾಲೂಕಿನ ಜನಪ್ರತಿನಿಧಿಗಳನ್ನು
ಬ್ರಹ್ಮಕಲಶೋತ್ಸವದ ಗೌರವಾಧ್ಯಕ್ಷರಾಗಿ ಅಥವಾ ಅಧ್ಯಕ್ಷರಾಗಿ ಆಯ್ಕೆ ಮಾಡುತ್ತಿರುವುದು
ಸಾಮಾನ್ಯವಾಗಿದೆ.ಅದರೆ ಬ್ರಹ್ಮಕಲಶೋತ್ಸವದ ಸಮಯದಲ್ಲಿ ನಡೆಯುವ ಧಾರ್ಮಿಕ ಸಭಾ
ಕಾರ್ಯಕ್ರಮಗಳಿಗೆ ಗ್ರಾಮಸ್ಥರು ಸೂಚಿಸಿದ ಅಥವಾ ಹಿಂದೂ ಧರ್ಮಕ್ಕಾಗಿ ಹಲವಾರು ವರ್ಷಗಳಿಂದ
ದುಡಿದ ನಾಯಕರುಗಳ ಹೆಸರನ್ನು ಕಡೆಗಣನೆ ಮಾಡಿ ಕೇವಲ ಜನಪ್ರತಿನಿಧಿಯಾಗಿ ಬ್ರಹ್ಮಕಲಶೋತ್ಸವದ
ಗೌರವಾಧ್ಯಕ್ಷರಾಗಿ ಅಥವಾ ಅಧ್ಯಕ್ಷರಾಗಿರುವಂತವರು ಸೂಚಿಸಿದ ವ್ಯಕ್ತಿಗೆ ಮಾತ್ರ ಅವಕಾಶ ಕಲ್ಪಿಸುವುದು
ಆಯಾ ಗ್ರಾಮಸ್ಥರಿಗೆ ಮತ್ತು ಧಾರ್ಮಿಕ ಕ್ಷೇತ್ರಕ್ಕೆ ಧಕ್ಕೆ ತರುವಂತಹ ವಿಚಾರ . ಹಿಂದೂ ಧರ್ಮಕ್ಕಾಗಿ
ದುಡಿದ ಯಾವೂದೇ ವ್ಯಕ್ತಿಯ ಕಡೆಗಣನೆ ಅಕ್ಷಮ್ಯ ಅಪರಾಧ ಇಂತಹ ಧೋರಣೆಯನ್ನು ಖಂಡಿಸುತ್ತಿದ್ದೇವೆ.
ಮತ್ತು ದೇವಸ್ಥಾನಗಳಲ್ಲಿ ರಾಜಕೀಯ ನಡೆಯನ್ನು ಬದಿಗಿಟ್ಟು ಎಲ್ಲಾ ಪಕ್ಷಗಳ ಮುಖಂಡರಿಗೆ ಮುಕ್ತ
ಅವಕಾಶ ಕಲ್ಪಿಸಬೇಕು ಮತ್ತು ಮುಜುರಾಯಿ ಇಲಾಖೆಗೆ ಸಂಭಂದಿಸಿದ ದೇವಸ್ಥಾನಗಳ ವ್ಯವಸ್ಥಾಪನಾ
ಸಮಿತಿಯ ರಚನೆಯ ಸಂಧರ್ಭದಲ್ಲಿ ರಾಜಕೀಯ ಜನಪ್ರತಿನಿಧಿಗಳನ್ನು ವ್ಯವಸ್ಥಾಪನಾ ಸಮಿತಿಗೆ
ಮುಖ್ಯಸ್ಥರನ್ನು ನೇಮಿಸಿದ್ದೇ ಆದಲ್ಲಿ ಮುಂದಿನ ದಿನಗಳಲ್ಲಿ ನಾಸ್ತಿಕ ವ್ಯಕ್ತಿಗಳು ಅಥವಾ ಪಕ್ಷಗಳ
ಜನಪ್ರತಿನಿಧಿಯಾದವರು ವ್ಯವಸ್ಥಾಪನ ಸಮಿತಿಗೆ ಮುಖ್ಯಸ್ಥರಾಗುವುದು ಸಾಮಾನ್ಯವಾಗುತ್ತದೆ.
ಅಂತಹ ಸಮಯದಲ್ಲಿ ನಾಸ್ತಿಕ ವ್ಯಕ್ತಿಯಿಂದ ದೇವಸ್ಥಾನದ ಅಭಿವೃದ್ಧಿ ಅಥವಾ ಉಳಿವು ಸಾಧ್ಯವೇ ಎಂದು ಪ್ರಶ್ನಿಸಿದ ಅವರು ಈ ಎಲ್ಲಾ ಕಾರಣಗಳಿಂದ ಆಯಾ ಭಾಗದ ಧಾರ್ಮಿಕ ಮುಖಂಡರನ್ನು ಮತ್ತು ಹಿರಿಯ ವ್ಯಕ್ತಿಗಳನ್ನು ಆಯ್ಕೆ ಮಾಡಬೇಕು ಮತ್ತು  ದೇವಸ್ಥಾನಗಳಲ್ಲಿ ರಾಜಕೀಯ ನಡೆಸುವುದನ್ನು ಕೊನೆಗೊಳಿಸಬೇಕೆಂದು ಒತ್ತಾಯಿಸುತ್ತೇನೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ಸಂತೋಷ್ ಕಡಂಬು, ನಿರಂಜನ್ ಕಡಂಬು, ಪ್ರವೀಣ್ ,ಪ್ರಜ್ವಲ್ ಉಪಸ್ಥಿತರಿದ್ದರು.

error: Content is protected !!