94 ಸಿ ಅರ್ಜಿಗಳಿಗೆ ವಿವಿಧ ಕಾನೂನಾತ್ಮಕ ತೊಡಕು: ಡಿಸೆಂಬರ್ ತಿಂಗಳೊಳಗೆ ತಾಲೂಕಿನ ಎಲ್ಲಾ 94 ಸಿ ಅರ್ಜಿಗಳ ವಿಲೇವಾರಿ’ : ಶಾಸಕ ಹರೀಶ್ ಪೂಂಜ

 

 

 

 

 

ಬೆಳ್ತಂಗಡಿ : ವಿವಿಧ ಕಾನೂನಾತ್ಮಕ ಸಮಸ್ಯೆಗಳಿಂದ ವಿಳಂಬವಾಗಿರುವ ಎಲ್ಲಾ 94 ಸಿ ಅರ್ಜಿಗಳನ್ನು ಡಿಸೆಂಬರ್ ತಿಂಗಳೊಳಗೆ ವಿಲೇವಾರಿ ಮಾಡಿ ಎಲ್ಲರಿಗೂ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜ ಹೇಳಿದರು. ಅವರು ಬೆಳ್ತಂಗಡಿ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು. ಅರಣ್ಯ ಹಾಗೂ ಇನ್ನಿತರ ತೊಡಕುಗಳಿಂದಾಗಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮನೆ ಕಟ್ಟಿ ವಾಸ ಮಾಡುತ್ತಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಲು ತೊಡಕ್ಕಾಗಿದೆ. ಈ ಬಗ್ಗೆ ಈಗಾಗಲೇ ಅಧಿಕಾರಿಗಳಲ್ಲಿ ಮಾಹಿತಿ ಪಡೆಯಲಾಗಿದ್ದು, ಡಿಸೆಂಬರ್ ಒಳಗೆ ತಾಲೂಕಿನ ಎಲ್ಲಾ 94 ಸಿ ಅರ್ಜಿಗಳ ವಿಲೇವಾರಿ ಮಾಡಿ ಸಮಸ್ಯೆ ಇತ್ಯರ್ಥಗೊಳಿಸಲಾಗುತ್ತದೆ ಎಂದರು.

error: Content is protected !!