ಪುಂಜಾಲಕಟ್ಟೆ- ಚಾರ್ಮಾಡಿ ಹೆದ್ದಾರಿ ವಿಸ್ತರಣೆ ಹಿನ್ನೆಲೆ, ಅಂತಿಮ ಹಂತದ ಖಾಸಗಿ ಆಸ್ತಿ ಜಾಗ ಗುರುತು ಕಾರ್ಯ: ಮನೆ, ಕಟ್ಟಡ, ಕೃಷಿ ಪ್ರದೇಶಗಳ ಗುರುತು, ಗುರುವಾಯನಕೆರೆ ಪರಿಸರದಲ್ಲಿ ಗುರುತು:

 

 

ಬೆಳ್ತಂಗಡಿ: ಮಂಗಳೂರು- ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿಯ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿ ಪುಂಜಾಲಕಟ್ಟೆ-ಚಾರ್ಮಾಡಿ ತನಕ ನಡೆಯಲಿದ್ದು,718 ಕೋಟಿ ರೂ. ಅನುದಾನ ಮಂಜೂರು ಗೊಂಡಿದೆ. ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಕಳೆದ ಬಾರಿ ಮಾಡಿದ ಸಮೀಕ್ಷೆಗಳು ನಡೆದಿದ್ದು ಅಂತಿಮ ಹಂತದ ಖಾಸಗಿ ಆಸ್ತಿ ಜಾಗ ಗುರುತು ಹಾಗೂ ಸೆಂಟ್ರಲ್ ಲೈನ್ ಮಾರ್ಕಿಂಗ್ ಕೆಲಸ ಪ್ರಾರಂಭವಾಗಿದೆ. ಪುಂಜಾಲಕಟ್ಟೆಯಿಂದ ಗುರುವಾಯನಕರೆ ತನಕ ಸರ್ವೆಯಲ್ಲಿ ಗುರುತಿಸಿದ ಮಾರ್ಕಿನಿಂದ ಒಂದು ಬದಿ 10 ಮೀಟರ್ ಸೇರಿ ಇಕ್ಕೆಲಗಳಲ್ಲಿ 20, ಮೀಟರ್ ಗುರುವಾಯನಕೆರೆಯಿಂದ ಉಜಿರೆ ಅನುಗ್ರಹ ಶಾಲೆಯವರೆಗೆ ಒಂದು ಬದಿ 15 ಮೀಟರ್ ಇಕ್ಕೆಲಗಳಲ್ಲಿ ಒಟ್ಟು 30 ಮೀಟರ್ ನಷ್ಟು ಅಗಲ ಅದೇ ರೀತಿ ಅಲ್ಲಿಂದ ಚಾರ್ಮಾಡಿ ತನಕ ಎರಡು ಬದಿ  ಒಟ್ಟು 20 ಮೀಟರ್  ಜಾಗ ಗುರುತಿಸಿ ಮಾರ್ಕಿಂಗ್ ಮಾಡಲಾಗುತ್ತಿದೆ. ಸೋಮವಾರ ಗುರುವಾಯನಕೆರೆ ಸುತ್ತ ಮುತ್ತಲಿನ ಪ್ರದೇಶದ
ಮನೆ, ಕಟ್ಟಡ, ಕೃಷಿ ಪ್ರದೇಶಗಳ ಗುರುತು ಕಾರ್ಯ ನಡೆಯಿತು.

 

 

 

ಇದು ಅಂತಿಮ ಹಂತದ ಮಾರ್ಕಿಂಗ್ ಆಗಿದ್ದು ಖಾಸಗಿ ಸ್ಥಳಗಳ ಮಾಲೀಕರಿಗೆ ನೋಟಿಸ್ ನೀಡಿ ಅದರ ಮೌಲ್ಯ ಗೊತ್ತುಪಡಿಸಲಾಗುತ್ತದೆ.
ರಸ್ತೆ ಅಭಿವೃದ್ಧಿ ನಿಟ್ಟಿನಲ್ಲಿ ಕಳೆದ ಬಾರಿ ಮಾಡಿದ ಸಮೀಕ್ಷೆಗಳು ನಡೆದಿದ್ದು ಇದು ಅಪೂರ್ಣವಾಗಿದ್ದು ಸರಕಾರದ ಆದೇಶದಂತೆ ಹೊಸ ಸಮೀಕ್ಷೆ ನಡೆಯುತ್ತಿದೆ.
ರಸ್ತೆಯನ್ನು ಹೆಚ್ಚು ನೇರ ಗೊಳಿಸುವ ಉದ್ದೇಶದಿಂದ ಹೊಸ ಸಮೀಕ್ಷೆ ಆದೇಶಿಸಲಾಗಿತ್ತು. ಈ ಹಿಂದೆ ಈ ಪ್ರದೇಶದಲ್ಲಿ 35 ಕಿ.ಮೀ. ದೂರದ ರಸ್ತೆ ಗುರುತಿಸಲಾಗಿದ್ದು, ನೇರಗೊಳಿಸುವ ಕಾರಣ 33.1ಕಿ.ಮೀ. ದೂರವಾಗಲಿದೆ. ಶೀಘ್ರವೇ ಟೆಂಡರ್ ಪೂರ್ಣಗೊಳ್ಳಲಿದ್ದು ನವೆಂಬರ್ ತಿಂಗಳಲ್ಲಿ ಕಾಮಗಾರಿ ಆರಂಭವಾಗಲಿದೆ ಎಂಬ ಮಾಹಿತಿ ಲಭಿಸಿದೆ.

error: Content is protected !!