ನದಿಯಲ್ಲಿ ತೇಲಿ ಬಂದ್ದ ಕಾಡುಕೋಣದ ಕಳೇಬರ: ಸವಣಾಲು ಬಳಿ ಫಲ್ಗುಣಿ ನದಿಯಲ್ಲಿ ಪತ್ತೆ :

 

 

 

ಬೆಳ್ತಂಗಡಿ: ನದಿಯಲ್ಲಿ ಕಾಡುಕೋಣದ ಮೃತ ದೇಹ ತೇಲಿ ಬಂದ ಘಟನೆ ಬೆಳ್ತಂಗಡಿ ತಾಲೂಕಿನ ಸವಣಾಲಿನಲ್ಲಿ ನಡೆದಿದೆ.ಸುಲ್ಯೋಡಿ ಹಿತ್ತಿಲ ಪೇಲ ಭಾಗದಿಂದ  ಸವಣಾಲು ಮೂಲಕ ವೇಣೂರು ಕಡೆಗೆ ಹರಿದು ಬರುವ ಫಲ್ಗುಣಿ ನದಿಯ ಹೆಬ್ಬರಹಿತ್ತಿಲು ಎಂಬಲ್ಲಿ  ಕಾಡುಕೋಣದ ಮೃತದೇಹ ಕಂಡುಬಂದಿದೆ.

 

 

ಕಳೆದ ಕೆಲವು ದಿನಗಳಿಂದ ತಾಲೂಕಿನಾದ್ಯಂತ ಭಾರೀ ಮಳೆಯಾಗುತಿದ್ದು ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ ನದಿ ದಾಟುವ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಬಂದಿರುವ ಅನುಮಾನ ವ್ಯಕ್ತವಾಗುತ್ತಿದೆ.ಈಗಾಗಲೇ ಸ್ಥಳೀಯರು ನೋಡಿ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.ಅಧಿಕಾರಿಗಳು ಸ್ಥಳಕ್ಕೆ  ಭೇಟಿ ನೀಡಿದ್ದು  ಪರಿಶೀಲನೆಯ ನಂತರ ಯಾವ ಕಾರಣದಿಂದ ಸಾವನ್ನಪ್ಪಿದೆ ಎಂದು   ತಿಳಿದುಬರಬೇಕಾಗಿದೆ.

error: Content is protected !!