ಬೆಂಗಳೂರಿನಿಂದ ಬೆಳ್ತಂಗಡಿಯತ್ತ ಡಾ. ಬಿ. ಯಶೋವರ್ಮ ಅವರ ಪಾರ್ಥಿವ ಶರೀರ : ವಿಮಾನ ನಿಲ್ದಾಣದಿಂದ ಹೊರಟ ಶಿಕ್ಷಣ ತಜ್ಞನನ್ನು ಹೊತ್ತ ಅಂಬುಲೆನ್ಸ್ :ಬೆಂಗಳೂರು ಎಸ್ ಡಿ.ಎಂ ಹಳೇ ವಿದ್ಯಾರ್ಥಿಗಳಿಂದ ಅಂತಿಮ ನಮನ

 

 

 

 

ಬೆಳ್ತಂಗಡಿ: ಭಾನುವಾರ ಸಿಂಗಾಪುರದಲ್ಲಿ ನಿಧನ ಹೊಂದಿದ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಶನಲ್ ಸೊಸೈಟಿಯ ಕಾರ್ಯದರ್ಶಿ ನಿವೃತ್ತ ಪ್ರಾಂಶುಪಾಲ ಡಾ. ಯಶೋವರ್ಮ ಅವರ ಪಾರ್ಥಿವಶರೀರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ್ದು ಅಲ್ಲಿಂದ ಬೆಳಿಗ್ಗೆ 9.45 ಗಂಟೆಗೆ  ಅಂಬುಲೆನ್ಸ್ ಮೂಲಕ  ಉಜಿರೆಗೆ ತರಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಹಳೇ ವಿಧ್ಯಾರ್ಥಿಗಳು ಅಂತಿಮ ನಮನ ಸಲ್ಲಿಸಿದರು

ಮಧ್ಯಾಹ್ನ 2 ಗಂಟೆಯ ಸುಮಾರಿಗೆ ಚಾರ್ಮಾಡಿ ಮತ್ತೂರು ದೇವಸ್ಥಾನದ ವಠಾರದಿಂದ ವಾಹನ ಜಾಥದೊಂದಿಗೆ ಪಾರ್ಥಿವ ಶರೀರದ ಮೆರವಣಿಗೆ ಉಜಿರೆ ಪೇಟೆಗೆ ಬಂದ್ದು ಅಲ್ಲಿಂದ ಪಾದಯಾತ್ರೆಯ ಮೂಲಕ ಉಜಿರೆ ಎಸ್ ಡಿ ಎಂ ಕಾಲೇಜು ಅವರಣಕ್ಕೆ ತರಲಾಗುವುದು.ಕಾಲೇಜಿನ ಒಳಾಂಗಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಸಂಜೆ 5.30 ರ ನಂತರ ನೀರಚಿಲುಮೆಯ ಅವರ ಸ್ವ ಗೃಹದ ವಠಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

error: Content is protected !!