ಫಾಲ್ಸ್ ನೋಡಲು ತೆರಳಿದ್ದ ಇಬ್ಬರು ಸಿಡಿಲಿಗೆ ಮೃತ್ಯು, ಮೂವರಿಗೆ ಗಾಯ: ಕರಾವಳಿಯಲ್ಲಿ ಸಿಡಿಲಾರ್ಭಟಕ್ಕೆ ಒಟ್ಟು ನಾಲ್ವರು ಬಲಿ!

 

 

 

 

ಮೂಡುಬಿದಿರೆ:  ಇಂದು ಸಂಜೆ ಗುಡುಗು ಸಹಿತ  ಮಳೆ ಸುರಿದಿದ್ದು, ಈ ಸಂದರ್ಭದಲ್ಲಿ  ಸಿಡಿಲು ಬಡಿದು ಇಬ್ಬರು ದಾರುಣವಾಗಿ ಸಾವನ್ನಪ್ಪಿ ಮತ್ತಿಬ್ಬರು ಗಾಯಗೊಂಡ ಘಟನೆ ಮೂಡಬಿದಿರೆ ಸಮೀಪದ ಪುತ್ತಿಗೆ ಪಂಚಾಯತ್ ವ್ಯಾಪ್ತಿಯ ಕಂಚಿಬೈಲು ಎಂಬಲ್ಲಿ ಇಂದು ಸಂಜೆ ಸುಮಾರು 5.30 ಸುಮಾರಿಗೆ ನಡೆದಿದೆ.  ಮೃತಪಟ್ಟವರನ್ನು ಕಂಚಿಬೈಲು ಪದವು ನಿವಾಸಿಗಳಾದ ಯಶವಂತ್ (25) ಮಣಿಪ್ರಸಾದ್ (25) ಎಂದು  ಗುರುತಿಸಲಾಗಿದೆ.

ಇಂದು ಸಂಜೆಯಾಗುತ್ತಲೇ ದಟ್ಟ ಮೋಡ ಕವಿದು ಗುಡುಗು ಸಹಿತ ಭಾರೀ ಮಳೆ ಸುರಿಯಿತು. ಈ ವೇಳೆ ಮೂಡುಬಿದಿರೆಯ ಅರ್ಬಿ ಪರಿಸರದಲ್ಲಿದ್ದ ಶೆಡ್​​ಗೆ ಸಿಡಿಲು ಬಡಿಯಿತು. ಕಂಚಿಬೈಲು‌ ಯೆರಗುಂಡಿ ಫಾಲ್ಸ್‌ಗೆ ಹೋಗಿದ್ದ ಯಶವಂತ್, ಮಣಿಪ್ರಸಾದ್ ಸಿಡಿಲು ಬಡಿದು ಸಾವಿಗೀಡಾದರು.ಇವರೊಂದಿಗಿದ್ದ ಗಣೇಶ್, ಸಂದೀಪ್ ಮತ್ತು ಪ್ರವೀಣ್ ಎಂಬ ಮೂವರು ಸಿಡಿಲಾಘಾತದಿಂದ ಗಾಯಗೊಂಡಿದ್ದಾರೆ. ತಕ್ಷಣ ಅವರನ್ನು ಅಲಂಗಾರ್  ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ತಿಳಿದು ಬಂದಿದೆ.ದ.ಕ.ಜಿಲ್ಲೆಯಲ್ಲಿ ಎರಡು ದಿನಗಳೊಳಗೆ ಈ ಪ್ರಕರಣವೂ ಸೇರಿ ಒಟ್ಟು ನಾಲ್ಕು ಜನರು ಸಿಡಿಲಿಗೆ ಬಲಿಯಾಗಿದ್ದಾರೆ. ಮೊನ್ನೆ ಪುತ್ತೂರಿನಲ್ಲಿ ಓರ್ವ ಹಾಗೂ ನಿನ್ನೆ ಕೊಣಾಜೆಯಲ್ಲಿ ಓರ್ವ ಸಿಡಿಲು ಬಡಿದು ಮೃತಪಟ್ಟಿದ್ದರು.

error: Content is protected !!