ಕಣಿಯೂರು ಶ್ರೀ ಮಹಾಮ್ಮಾಯಿ ಮಂದಿರ: ನವರಾತ್ರಿ ವಿಶೇಷ ಪೂಜೆ

 

 

 

 

ಕಣಿಯೂರು: ಶಿವಾಜಿನಗರದ ಶ್ರೀ ಮಹಾಮ್ಮಾಯಿ ಮಂದಿರದಲ್ಲಿ ಭಾನುವಾರ ನವರಾತ್ರಿಯ ವಿಶೇಷ ಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆ ನೆರವೇರಿತು.
ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ ಮಾಡಲಾಗಿತ್ತು. ದೇವರಿಗೆ ಹೂವಿನ ಪೂಜೆ ಬಳಿಕ ಮಹಾಪೂಜೆ ಜರುಗಿತು. ಬೊಮ್ಮಣ್ಣ ನಾಯ್ಕ ಮಾಚಾರು ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

 

 

ಮಂದಿರದ ಗೌರವಾಧ್ಯಕ್ಷ ಪುತ್ತು ನಾಯ್ಕ ಕುಡುವಂತಿ, ಅಧ್ಯಕ್ಷ ಬಾಬು ನಾಯ್ಕ ಮೈಪಾಜೆ, ಉಪಾಧ್ಯಕ್ಷ ತಿಲಕ್ ಕುಡುವಂತಿ, ಕೂಡುಕಟ್ಟಿನ ಗುರಿಕಾರ ಸಂಜೀವ ನಾಯ್ಕ, ಉಮೇಶ ನಾಯ್ಕ ಕೇಲ್ದಡ್ಕ, ಮೋಹನ್ ಕೊಯ್ಯೂರು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು, ಪೂಜಾ ಸಮಿತಿ ಸದಸ್ಯರು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ದರ್ಶನ ಪಡೆದರು.

error: Content is protected !!