ಚಿಕಿತ್ಸಾ ಸಹಾಯಾರ್ಥ ಸ್ಪಂದನಾ ಸೇವಾ ಸಂಘದಿಂದ ಸೇವಾ ಯೋಜನೆಯ ಧನಸಹಾಯ ವಿತರಣೆ:

 

 

 

 

ಬೆಳ್ತಂಗಡಿ: ಸ್ಪಂದನಾ ಸೇವಾ ಸಂಘದ 41ನೇ ಸೇವಾ ಯೋಜನೆಯ ಅಂಗವಾಗಿ ಪಾರ್ಶ್ವವಾಯುವಿನಿಂದ ಬಳಲುತ್ತಿರುವ, ಆರ್ಥಿಕ ಸಂಕಷ್ಟದಲ್ಲಿದ್ದ ಬಂದಾರು ಗ್ರಾಮ, ಬೈಪಾಡಿ ಅರಳಿಕ್ಕೆ ನಿವಾಸಿ ಚಿದಾನಂದ ಗೌಡ ಇವರಿಗೆ ಚಿಕಿತ್ಸಾ ಸಹಾಯಾರ್ಥ 20 ಸಾವಿರ ರೂ. ಮೌಲ್ಯದ ಚೆಕ್ಕನ್ನು ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕ ಹರೀಶ್ ಗೌಡ ಪರಪ್ಪಾಜೆ ಮತ್ತು ಗ್ರಾಮ ಸಮಿತಿ ಅಧ್ಯಕ್ಷ ಮುತ್ತಪ್ಪ ಗೌಡ ಅವರ ಮೂಲಕ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕಿ ಉಷಾ ದೇವಿ ಕಿನ್ಯಾಜೆ, ವಾಣಿ ಸೌಹಾರ್ದ ಕೋ-ಆಪರೇಟೀವ್ ಸೊಸೈಟಿ (ಲಿ.) ನಿರ್ದೇಶಕ ಸುರೇಶ್ ಕೌಡಂಗೆ, ವಾಣಿ ಪದವಿ ಪೂರ್ವ ಕಾಲೇಜು ಉಪನ್ಯಾಸಕಿ ಮೀನಾಕ್ಷಿ ಮಹಾಬಲ ಗೌಡ, ಉದ್ಯಮಿ ಜಯಣ್ಣ ಗೌಡ ಮೀನಂದೇಲು, ಜನಾರ್ಧನ ಗೌಡ ನಿರ್ಮುಡ, ಬಾಲಕೃಷ್ಣ ಗೌಡ ಬೈಪಾಡಿ, ಶಿಕ್ಷಕರಾದ ಮಹೇಶ್ ಗೌಡ ಬೆಳಾಲು, ಚಿದಾನಂದ ಗೌಡ ಉರೆಜ್ಜ ಬೆಳಾಲು, ಸೀತಾರಾಮ್ ಬೆಳಾಲು, ನಿತಿನ್ ಕನ್ಯಾಡಿ, ಮೋಹನ್ ದುಬೈ, ಸ್ಥಳೀಯರು ಹಾಗೂ ಸ್ಪಂದನಾ ಸೇವಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

error: Content is protected !!