ಜಿಲ್ಲೆಯಲ್ಲಿ‌ ಲಾಕೌನ್ ಮತ್ತಷ್ಟು ಸಡಿಲಿಕೆ: ಸಂಜೆ 5ರವರೆಗೆ ವ್ಯಾಪಾರಕ್ಕೆ ಅವಕಾಶ: ವಾರಂತ್ಯದ ಎರಡು ದಿನ ವೀಕೆಂಡ್ ಕರ್ಫ್ಯೂ ಮುಂದುವರಿಕೆ

ಬೆಳ್ತಂಗಡಿ; ಕೊರೋನಾ ಸೊಂಕು ನಿಯಂತ್ರಣ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪಾಸಿಟಿವಿಟಿ ರೇಟ್ ಕಡಿಮೆಯಾಗುತಿದ್ದು ಜಿಲ್ಲೆಯಲ್ಲಿ ಲಾಕ್ ಡೌನ್ ಮತ್ತಷ್ಟು ಸಡಿಲಿಕೆ ಮಾಡಲಾಗಿದ್ದು, ನಾಳೆ ಶುಕ್ರವಾರದಿಂದ ಬೆಳಗ್ಗೆ 7 ರಿಂದ 5 ರವರೆಗೆ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿಯವತ ಆದೇಶದ ಹಿನ್ನೆಲೆಯಲ್ಲಿ ದ.ಕ ಜಿಲ್ಲಾಧಿಕಾರಿಯಿಂದ ಜಿಲ್ಲಾ ಗೈಡ್ ಲೈನ್ ಬಿಡುಗಡೆ ಮಾಡಲಾಗಿದೆ. ಶನಿವಾರ ಆದಿತ್ಯವಾರ ಎಂದಿನಂತೆ ವಾರಾಂತ್ಯ ಕರ್ಪ್ಯೂ ಇರಲಿದ್ದು ಅಗತ್ಯ ವಸ್ತು ಪಡೆಯಲು ಅವಕಾಶ ಇದೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2 ರ ತನಕ ಅಗತ್ಯ ವಸ್ತುಗಳಾದ ದಿನಸಿ, ತರಕಾರಿ,ಹಣ್ಣು ,ಮೀನು ಮಾಂಸ, ಹಾಲು, ಮದ್ಯದಂಗಡಿ, ನ್ಯಾಯಬೆಲೆ ಅಂಗಡಿ, ಬೀದಿ ಬದಿ ವ್ಯಾಪಾರಿಗಳಿಗೆ ಅವಕಾಶ ಇದೆ. ಜುಲೈ 5 ರ ತನಕ ಮಾತ್ರ ಸರ್ಕಾರದ ಆದೇಶ ಜಾರಿಯಲ್ಲಿರಲಿದೆ.

error: Content is protected !!