ಬಿಜೆಪಿ ಮಹಿಳಾ ಮೋರ್ಚಾದಿಂದ ಗಿಡ ನೆಡುವ ಕಾರ್ಯಕ್ರಮ: ಜನ ಸಂಘದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಸ್ಮರಣಾರ್ಥ ಕಾರ್ಯಕ್ರಮ

ಬೆಳ್ತಂಗಡಿ: ಭಾರತೀಯ ಜನತಾ ಪಾರ್ಟಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ‌ ಭಾರತೀಯ ಜನ ಸಂಘದ ಸ್ಥಾಪಕರಾದ ಡಾ.‌ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಜನ್ಮ ದಿನ ಜುಲೈ 06 ಪುಣ್ಯ ತಿಥಿ ಜೂ 23 ಇದರ ಅಂಗವಾಗಿ ಗಿಡ ನೆಡುವ ಕಾರ್ಯಕ್ರಮ ಮುಂಡಾಜೆಯಲ್ಲಿ ನಡೆಯಿತು.

ಸುಮಾರು 25 ಸಸಿಗಳನ್ನು ನೆಟ್ಟು ಚಾಲನೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮುಂಡಾಜೆ ಪಂಚಾಯತ್ ಅಧ್ಯಕ್ಷೆ ರಂಜನಿ, ಉಪಾಧ್ಯಕ್ಷೆ ದಿಶಾ ಎನ್. ವಿ. ಫಣೀಶ್,ರಾಧಕೃಷ್ಣ ರೈ, ರಾಮ್ ದಾಸ್ ಬಂಟ್ವಾಳ, ಬಿ ಜೆ.ಪಿ.ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ,ಬೆಳ್ತಂಗಡಿ ಮಂಡಲ ಉಪಾಧ್ಯಕ್ಷ ಸೀತಾರಾಮ ಬೆಳಾಲು, ಕಾರ್ಯದರ್ಶಿ ಶ್ರೀನಿವಾಸ್ ಧರ್ಮಸ್ಥಳ, ಗಣೇಶ್ ನಾವೂರು,ಗಣೇಶ್ ಬಗೇರ , ಮಹಿಳಾ ಮೋರ್ಚಾ ಕಾರ್ಯದರ್ಶಿ ಹಾಗೂ ಲಾಯಿಲ ಗ್ರಾಮ ಪಂಚಾಯತ್ ಸದಸ್ಯೆ ಸವಿತ ಶೆಟ್ಟಿ, ಸುಗಂಧಿ , ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !!