ನಾಳೆಯಿಂದ ಮಧ್ಯಾಹ್ನವರೆಗೆ ಬಸ್ ಓಡಾಟ: ಶೇ.50 ಪ್ರಯಾಣಿಕರಿಗಷ್ಟೇ ಅವಕಾಶ: ಹವಾನಿಯಂತ್ರಿತ ಮಳಿಗೆ ಬಂದ್: ವಾರಾಂತ್ಯ ತುರ್ತು ಅಂಗಡಿಗಳಿಗಷ್ಟೇ ತೆರೆಯಲು ಅವಕಾಶ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ಬುಧವಾರದಿಂದ ಅನ್ವಯವಾಗುವ ಲಾಕ್ ಡೌನ್ ನಿಯಮಾವಳಿಗಳ ಪರಿಷ್ಕರಣೆ ನಡೆದಿದೆ. ಇದರಲ್ಲಿ ಒಟ್ಟು ಆಸನ ಸಾಮರ್ಥ್ಯದ ಶೇ.50ರಷ್ಟು ಪ್ರಯಾಣಿಕರ ಸಹಿತ ಬೆಳಗ್ಗೆ 7ರಿಂದ ಅಪರಾಹ್ನ 1ರ ತನಕ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ನಿಂತು ಪ್ರಯಾಣಕ್ಕೆ ಅವಕಾಶ ಇಲ್ಲ.

ಬೆಳಗ್ಗೆ 7ರಿಂದ ಅಪರಾಹ್ನ 2ರ ವರೆಗೆ ಹವಾನಿಯಂತ್ರಿತ ಹೊರತು ಪಡಿಸಿ ಬಾಕಿ ಎಲ್ಲ ಅಂಗಡಿ, ಮಳಿಗೆ ತೆರೆಯಬಹುದು.

ಬೆಳಗ್ಗೆ 7ರಿಂದ 10ರ ವರೆಗೆ ನಡಿಗೆ, ಜಾಗಿಂಗ್ ಬಳಕೆಗೆ ಉದ್ಯಾನಗಳನ್ನು ತೆರೆಯಬಹುದು. ವಾರಾಂತ್ಯ ಕರ್ಪ್ಯೂ ಸಂದರ್ಭ ಅಗತ್ಯ ಸೇವೆ ಹೊರತುಪಡಿಸಿ ಬಸ್ ಹಾಗೂ ಇತರ ವಾಹನ ಸಂಚಾರಕ್ಕೂ ಅವಕಾಶ ಇಲ್ಲ. ಹೊಟೇಲುಗಳಿಂದ ಪಾರ್ಸೆಲ್, ಹೋಂ ಡೆಲಿವರಿಗೆ ಮಾತ್ರ ಅವಕಾಶ.

error: Content is protected !!