ಜೂನ್ 30 ರವರೆಗೆ ಖಾಸಗಿ ಬಸ್ಸ್ ಓಡಾಟ ಇಲ್ಲ: ಬಸ್ಸ್ ಮಾಲಕರ ಸಂಘ ನಿರ್ಧಾರ

ಬೆಳ್ತಂಗಡಿ: ನಾಳೆಯಿಂದ ಜಿಲ್ಲಾಡಳಿತ ಬೆಳಿಗ್ಗೆ 7 ರಿಂದ 1 ಗಂಟೆಯವರೆಗೆ ಬಸ್ಸ್ ಓಡಾಟಕ್ಕೆ ಅನುಮತಿ ನೀಡಿದೆ ಅದರೆ ಜೂನ್ 30 ರ ತನಕ ಬಸ್ಸ್ ಓಡಿಸುವುದಿಲ್ಲ ಎಂದು ಜಿಲ್ಲಾ ಬಸ್ಸ್ ಮಾಲಕರ ಸಂಘ ನಿರ್ಧಾರಿಸಿದೆ.

ಈ ಬಗ್ಗೆ ದ.ಕ ಜಿಲ್ಲಾ ಬಸ್ಸ್ ಮಾಲಕರ ಸಂಘದ ಅಧ್ಯಕ್ಷ ದಿಲ್ ರಾಜ್ ಆಳ್ವ ಸ್ಪಷ್ಟನೆ ನೀಡಿ 7 ದಿನ ಬಸ್ಸ್ ಓಡಿಸಲು ಒಂದು ತಿಂಗಳ ತೆರಿಗೆ ಕಟ್ಟಬೇಕು ಇದು ಕಷ್ಟ ಸಾದ್ಯ, ಶೇ 50 ಪ್ರಯಾಣಿಕರಿಗೆ ಬಸ್ಸಿನಲ್ಲಿ ಪ್ರಯಾಣಕ್ಕೆ ಅವಕಾಶ ನೀಡಬೇಕು ಇದು ಈಗೀನ ಡಿಸಿಲ್ ರೇಟ್ ನಿಂದ ಅಸಾದ್ಯ, ನಗರದಲ್ಲಿ ರಸ್ತೆಗಳನ್ನು ಅಗೆದು ಹಾಕಿದ್ದಾರೆ, 2 ತಿಂಗಳಿನಿಂದ ನಿಂತಿದ್ದ ಬಸ್ಸನ್ನು ಗ್ಯಾರೇಜ್ ಗೆ ಕೊಂಡು ಹೋಗಿ ರಿಪೇರಿ ಮಾಡಿಸಬೇಕು, ಈ ಎಲ್ಲಾ ಕಾರಣಗಳಿಂದಾಗಿ ಜೂನ್ ತಿಂಗಳ ಕೊನೆಯ ತನಕ ಬಸ್ಸ್ ಓಡಿಸುವುದಿಲ್ಲ ಎಂದಿದ್ದಾರೆ.

error: Content is protected !!