ತಾ.ಪಂ. ಆಡಳಿತಾಧಿಕಾರಿಯಾಗಿ ದ.ಕ.ಜಿ.ಪಂ. ಉಪಕಾರ್ಯದರ್ಶಿ ಆನಂದ ಕುಮಾರ್ ನಿಯೋಜನೆ: ತಾ.ಪಂ. ಕಚೇರಿಯಲ್ಲಿ ಅಧಿಕಾರ ಸ್ವೀಕಾರ

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪಂಚಾಯಿತಿ ಆಡಳಿತ ಅವಧಿ ಕೊನೆಗೊಂಡಿದ್ದು, ಚುನಾವಣೆ ಆಗಿ ಮುಂದಿನ ಆಡಳಿತ ಬರುವವರೆಗೆ ತಾ.ಪಂ. ಆಡಳಿತಾಧಿಕಾರಿಯಾಗಿ ದ.ಕ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಆನಂದ ಕುಮಾರ್ ಕೆ. ಅವರು ನಿಯೋಜನೆಗೊಂಡಿದ್ದು ಅವರು ಬುಧವಾರ ಬೆಳ್ತಂಗಡಿ ತಾ.ಪಂ. ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಈ ಸಂದರ್ಭ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಪ್ರಭಾರ ವ್ಯವಸ್ಥಾಪಕ ಗಣೇಶ್ ಪೂಜಾರಿ, ಸಹಾಯಕ ಲೆಕ್ಕಾಧಿಕಾರಿ ಶಕುಂತಲಾ ಶೆಣೈ ಉಪಸ್ಥಿತರಿದ್ದರು.

error: Content is protected !!