ಮೂಡಬಿದಿರೆ ಲಾರಿ ಟೆಂಪೊ ನಡುವೆ ಭೀಕರ ಅಪಘಾತ ಉಜಿರೆ ನಿವಾಸಿ ಸಾವು

ಬೆಳ್ತಂಗಡಿ: ಮೂಡಬಿದಿರೆಯ ಶಿರ್ತಾಡಿ ಸಮೀಪ ಲಾರಿ ಹಾಗೂ ಗೂಡ್ಸ್ ಟೆಂಪೊ ನಡುವೆ ನಡೆದ ಅಪಘಾತದಲ್ಲಿ ಉಜಿರೆ ನಿವಾಸಿ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತ ಪಟ್ಟವರನ್ನು ಉಜಿರೆ ನೇಕಾರ ಪೇಟೆಯ ಬಾಲಕೃಷ್ಣ ಶೆಟ್ಟಿ ಹಾಗೂ ಶೋಭಾ ಶೆಟ್ಟಿ ಎಂಬವರ ಪುತ್ರ ಭವಿಷ್ ಶೆಟ್ಟಿ (27)ಎಂದು ತಿಳಿದುಬಂದಿದೆ.

ಇವರು ಅನ್ ಲೈನ್ ಕಂಪನಿಯೊಂದರ ಅರ್ಡರ್ ಗಳ ವಸ್ತು ಗಳನ್ನು ತನ್ನ ಗೂಡ್ಸ್ ಟೆಂಪೊದಲ್ಲಿ ಸಾಗಿಸುವ ಕೆಲಸ ಮಾಡುತಿದ್ದು ಇಂದು ಮೂಡಬಿದಿರೆಯ ಶಿರ್ತಾಡಿ ಸಮೀಪ ಎದುರಿನಿಂದ ಬಂದ್ದ ಲಾರಿಯೊಂದು ಇವರು ಚಲಾಯಿಸುತಿದ್ದ ಗೋಡ್ಸ್ ಗೆ ಡಿಕ್ಕಿ ಹೊಡೆದು‌ ಇವರು ಗಂಭೀರ ಗಾಯಗೊಂಡಿದ್ದು ತಕ್ಷಣ ಮೂಡಬಿದ್ರೆ ಖಾಸಗಿ ಆಸ್ಪತ್ರೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕೊಂಡು ಹೋಗಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮನೆಗೆ ಬರುವಾಗ ಈ ಘಟನೆ ಸಂಭವಿಸಿರಬಹುದು ಎಂದು ತಿಳಿದುಬಂದಿದೆ.

error: Content is protected !!