ಮದುವೆಯಾಗಲು ಮನೆ ಬಿಟ್ಟು ಬಾರದ ಹುಡುಗಿಗೆ ಪ್ರಿಯಕರನಿಂದ ಚೂರಿ ಇರಿತ

ಬೆಳ್ತಂಗಡಿ: ಮದುವೆಯಾಗಲು ಪ್ರೀತಿಸಿದ ಹುಡುಗಿ ಮನೆ ಬಿಟ್ಟು ಬರಲಿಲ್ಲ ಎಂಬ ಕಾರಣಕ್ಕೆ ಹುಡುಗಿಗೆ ಚೂರಿಯಿಂದ ಇರಿದ ಘಟನೆ ಬೆಳ್ತಂಗಡಿ ತಾಲೂಕಿನ ಲಾಯ್ಲ ಗ್ರಾಮದ ಪುತ್ರಬೈಲು ಎಂಬಲ್ಲಿ ನಡೆದಿದೆ.

ಪುಂಜಾಲಕಟ್ಟೆ ಸಮೀಪದ ಶಮೀರ್ ಎಂಬ ಯುವಕ ಪುತ್ರಬೈಲು ನಿವಾಸಿ ರಶೀದಾ ಎಂಬ ಹುಡುಗಿಯನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದು ಎ 06 ರಂದು ರಾತ್ರಿ ಹುಡುಗಿಯ ಮನೆಗೆ ಹೋಗಿ ಮದುವೆಯಾಗಲು ಮನೆ ಬಿಟ್ಟು ಬರಬೇಕು ಎಂದು ಹುಡುಗಿಗೆ ಒತ್ತಾಯಿಸಿದಾಗ ಅವಳು ಬರದೇ ಇದ್ದಾಗ ಕೋಪದಲ್ಲಿ ಅವಳ ಮನೆಗೆ ನುಗ್ಗಿ ಅವಳಿಗೆ ಚೂರಿಯಿಂದ ಇರಿದು ಗಾಯಗೊಳಿಸಿದ್ದಾನೆ.

ಯುವತಿಯನ್ನು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಿಸಲಾಗಿದೆ.‌ಈ ಬಗ್ಗೆ ಯುವತಿ ನೀಡಿದ ದೂರಿನನ್ವಯ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!