ನೆರಿಯ ಕಾಟಾಜೆ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಧರ್ಮಸ್ಥಳದಲ್ಲಿ ಬಿಡುಗಡೆ

ಬೆಳ್ತಂಗಡಿ: ನೆರಿಯ ಗ್ರಾಮದ ಕಾಟಾಜೆ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಏಪ್ರಿಲ್ 20 ರಿಂದ 29ರ ವರೆಗೆ ನಡೆಯುವ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆ ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಅಧ್ಯಕ್ಷ, ಶಾಸಕ ಹರೀಶ್ ಪೂಂಜಾ, ಆಡಳಿತ ಮೊಕ್ತೇಸರ ಕೃಷ್ಣಕುಮಾರ್ ಅಣಿಯೂರು,  ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎ. ಜಯದೇವ್, ಪ್ರ. ಕಾರ್ಯದರ್ಶಿ ಪಿ.ಕೆ. ರಾಜನ್, ಬ್ರಹ್ಮ ಕಲಶ ಕಾರ್ಯಾಧ್ಯಕ್ಷ ಸತೀಶ್ ಕುಲೆನಾಡಿ, ಪ್ರ.ಕಾರ್ಯದರ್ಶಿ ನವೀನ್ ನೆರಿಯಾ, ಕೋಶಾಧಿಕಾರಿ ಧರ್ಮಣ ಗೌಡ, ಸ್ವಾಗತ ಸಮಿತಿ ಸಂಚಾಲಕ ನಂದ ಕುಮಾರ್, ಗ್ರಾ.ಪಂ. ಅಧ್ಯಕ್ಷೆ ವಸಂತಿ, ಉಪಾಧ್ಯಕ್ಷೆ ಕುಶಲ, ಸದಸ್ಯರಾದ ಬಾಬು ಗೌಡ, ಸಚಿನ್, ದಿನೇಶ್, ಸಜಿತಾ, ಸವಿತಾ, ಮಾಲತಿ, ಅರ್ಚಕ ದಿವಾಕರ ಭಟ್, ಸಮಿತಿ ಪದಾಧಿಕಾರಿಗಳಾದ ಸವಿತಾ ಜಯದೇವ್. ದೀಕ್ಷಿತ್ ನೆರಿಯ, ಆನಂದ ಪೂಜಾರಿ, ರಂಜನ್ ನೆರಿಯ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!