ಬೆಳ್ತಂಗಡಿ ರೋಟರಿ ಕ್ಲಬ್: ರಾಷ್ಟ್ರೀಯ ಕೃಷಿಕರ ದಿನಾಚರಣೆ

ಬೆಳ್ತಂಗಡಿ: ಬೆಳ್ತಂಗಡಿ ರೋಟರಿ ಕ್ಲಬ್‌ ನಿಂದ ರಾಷ್ಟ್ರೀಯ ಕೃಷಿಕರ ದಿನದಂದು ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ರಾಜ್ಯ ಹಾಗೂ ರಾಷ್ಟ್ರಪ್ರಶಸ್ತಿ ವಿಜೇತ ಕೃಷಿಕ ಪ್ರಭಾಕರ ಮಯ್ಯ ಅವರನ್ನು ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು. ಕೃಷಿ ಲೋಕದ ವಿಶ್ವಕೋಶವಾಗಿರುವ ಮಯ್ಯ ಅವರು ಮಾತನಾಡಿ, ತನಗೆ ಮಾಡಿದ ಈ ಸನ್ಮಾನ ಇಡೀ ಸಮಾಜದ ಕೃಷಿಕರಿಗೆ ಮಾಡಿದ ಸನ್ಮಾನ ಎಂದರು.

ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷ ಬಿ.ಕೆ ಧನಂಜಯ ರಾವ್, ಕಾರ್ಯದರ್ಶಿ ಶ್ರೀಧರ ಕೆ.ವಿ., ಶರತ್ ಕುಮಾರ್ ಟಿ.ಕೆ, ಅಬೂಬುಕರ್ ಉಪಸ್ಥಿತರಿದ್ದರು.

error: Content is protected !!