ಎನ್‌ಪಿಎಸ್ ನೌಕರರ ಸಂಘದಿಂದ ಶಾಸಕರು, ವಿಧಾನ ಪರಿಷತ್ ಸದಸ್ಯರಿಗೆ ಮನವಿ

     

ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ಎನ್‌ಪಿಎಸ್ ನೌಕರರ ಸಂಘದ ವತಿಯಿಂದ ಸೋಮವಾರ ಶಾಸಕ ಹರೀಶ್ ಪೂಂಜ ಹಾಗೂ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಅವರನ್ನು ‌ಭೇಟಿ ಮಾಡಿದರು.
ನೌಕರರ ಮಾರಕ ಯೋಜನೆ ಎನ್‌ಪಿಎಸ್ ರದ್ದು ಪಡಿಸಿ, ಹಳೆ ಪಿಂಚಣಿಯನ್ನು ಜಾರಿಗೊಳಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಸುರೇಶ್ ಮಾಚಾರ್, ಪ್ರಧಾನ ಕಾರ್ಯದರ್ಶಿ ಸೀತಾರಾಮ, ಪದಾಧಿಕಾರಿಗಳಾದ ಪರಮೇಶ್, ವಿಶ್ವ, ಕಂದಾಯ ಇಲಾಖೆಯ ಕಿರಣ್ ಕುಮಾರ್, ಶಿಕ್ಷಣ ಇಲಾಖೆಯ ರಾಜೇಶ್ ನೆಲ್ಯಾಡಿ, ಆರೋಗ್ಯ ಇಲಾಖೆಯ ಗುಣವತಿ, ಮೋಹಿನಿ ಉಪಸ್ಥಿತರಿದ್ದರು.

error: Content is protected !!