ಬೆಳ್ತಂಗಡಿ, ಪಿಕಪ್ ಚಾಲಕ ನೇಣು ಬಿಗಿದು   ಆತ್ಮಹತ್ಯೆ:

 

 

ಬೆಳ್ತಂಗಡಿ: ಪಿಕಪ್ ವಾಹನ ಚಾಲಕರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡವರನ್ನು ಸತೀಶ್ ಕುಲಾಲ್  ಎಂದು ಗುರುತಿಸಲಾಗಿದೆ.
ಪಣೆಜಾಲು ಸಮೀಪದ ಗುಂಪಲಾಜೆ ಎಂಬಲ್ಲಿ ವಾಸವಿದ್ದ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಪಿಕಪ್ ವಾಹನ ಚಾಲಕರಾಗಿ ದುಡಿಯುತಿದ್ದ ಸತೀಶ್ ನಿನ್ನೆಯಷ್ಟೆ ತನ್ನ ಹಳೆಯ ಪಿಕಪ್ ವಾಹನವನ್ನು ಬದಲಾಯಿಸಿ ಬೇರೆ ಗೂಡ್ಸ್ ವಾಹನವನ್ನು ಖರೀದಿಸಿದ್ದರು. ಅದರೆ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಆತ್ಮಹತ್ಯೆಗೆ  ಕಾರಣ ಇನ್ನೂ ತಿಳಿದು ಬರಬೇಕಾಗಿದೆ.

error: Content is protected !!