ಉಜಿರೆ: ನಾಪತ್ತೆಯಾಗಿದ್ದ ಬೆಳಾಲಿನ ರಿಕ್ಷಾ ಚಾಲಕ ಆತ್ಮಹತ್ಯೆ..? ನೆಲ್ಲಿಕಾರ್ ಸಮೀಪ ಮೃತದೇಹ ಪತ್ತೆ

 

 

 

ಉಜಿರೆ: ಆಟೋ ಚಾಲಕರಾಗಿದ್ದ ಮಾಚಾರು ನಿವಾಸಿ ಸುಧಾಕರ್ (35 ) ನಾಪತ್ತೆಯಾಗಿದ್ದು ಇಂದು (ಜೂ.29) ಬಜೆಗೋಳಿಯ ನೆಲ್ಲಿಕಾರ್ ಸಮೀಪದ ಕಾಡಿನಲ್ಲಿ ನೇಣು ಹಾಕಿಕೊಂಡ ರೀತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಜೂ.28ರಂದು ಬೆಳಗ್ಗೆ ಆಟೋ ಹಿಡಿದುಕೊಂಡು ಮನೆಯಿಂದ ಹೊರಟವರು ಮತ್ತೆ ವಾಪಸ್ ಮನೆಗೆ ಬಾರದೆ ನಾಪತ್ತೆಯಾಗಿದ್ದರು. ಸದ್ಯ ಇವರ ಮೃತದೇಹ ಕಾಡಿನಲ್ಲಿ ಪತ್ತೆಯಾಗಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

error: Content is protected !!