ಮಂಗಳೂರು: ವಿದ್ಯುತ್ ಶಾಕ್ ನಿಂದ ಇಬ್ಬರು ಆಟೋ ಚಾಲಕರ ದುರ್ಮರಣ

ಮಂಗಳೂರು : ವಿದ್ಯುತ್ ತಂತಿ ತುಂಡಾಗಿ ಮೈ ಮೇಲೆ ಬಿದ್ದು ಇಬ್ಬರು ಆಟೋ ಚಾಲಕರು ಸಾವನ್ನಪ್ಪಿದ ಘಟನೆ ಜೂ.27ರಂದು ಬೆಳಗ್ಗೆ ಮಂಗಳೂರಿನಲ್ಲಿ ಸಂಭವಿಸಿದೆ.


ರೋಸಾರಿಯೋ ಶಾಲಾ ಹಿಂಬದಿಯಲ್ಲಿ ಆಟೋ ಚಾಲಕರೊಬ್ಬರು ಆಟೋ ತೊಳೆಯುತ್ತಿದ್ದ ಸಂದರ್ಭದಲ್ಲಿ ಅಚಾನಕ್ಕಾಗಿ ವಿದ್ಯುತ್ ತಂತಿ ಅವರ ಮೇಲೆ ಬಿದ್ದಿದ್ದು ಈ ವೇಳೆ ಅವರನ್ನು ರಕ್ಷಿಸಲು ಮತ್ತೊಬ್ಬ ಆಟೋ ಚಾಲಕ ಮುಂದಾದಾಗ ಇಬ್ಬರಿಗೂ ವಿದ್ಯುತ್ ಶಾಕ್ ಹೊಡೆದು ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ಮೃತರಲ್ಲಿ ಓರ್ವರನ್ನು ಉಪ್ಪಿನಂಗಡಿ ನಿವಾಸಿ ದೇವರಾಜ್ ಗೌಡ ಎಂದು ಗುರುತಿಸಲಾಗಿದೆ.

ಮಳೆಗಾಲದ ಈ ಸಂದರ್ಭದಲ್ಲಿ ಗಾಳಿ, ಮಳೆಗೆ ಅಲ್ಲಲ್ಲಿ ವಿದ್ಯುತ್ ತಂತಿಗಳು ರಸ್ತೆಗೆ ಬಿದ್ದಿರುವ ಸಾಧ್ಯತೆಗಳಿದ್ದು ಸಾರ್ವಜನಿಕರು ಬಹಳ ಎಚ್ಚರಿಕೆಯಿಂದರಬೇಕಾಗಿದೆ.

error: Content is protected !!