ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ ಅಪಘಾತ.! ಇಬ್ಬರು ಸಾವು: ಮೂವರಿಗೆ ಗಾಯ

ಹೊಸಕೋಟೆ: ಕುಡಿದ ಅಮಲಿನಲ್ಲಿ ಕಾರು ಚಲಾಯಿಸಿ ಅಪಘಾತ ಮಾಡಿ ಪರಾರಿಯಾಗಿದ್ದಲ್ಲದೆ, ಮತ್ತೆರೆಡು ಬೈಕ್‌ಗಳಿಗೆ ಡಿಕ್ಕಿ ಹೊಡೆದು ಇಬ್ಬರು ಸಾವನ್ನಪ್ಪಿರುವ ಘಟನೆ ಜೂ.06ರಂದು ಹೊಸಕೋಟೆಯಲ್ಲಿ ನಡೆದಿದೆ.

ಹೊಸಕೋಟೆ ತಾಲೂಕಿನ ಚಿಂತಾಮಣಿ ರಾಜ್ಯ ಹೆದ್ದಾರಿಯ ಮದೀನ ಹೋಟೆಲ್ ಬಳಿ ಕಾರಿನಲ್ಲಿ ಬಂದ ಆರೋಪಿ ಚಾಲಕ ಪ್ರಗತೀಶ್ ರಾವ್ ಅಪಘಾತವೆಸಗಿದ್ದಾನೆ. ಘಟನೆಯಲ್ಲಿ ಕಣ್ಣೂರಹಳ್ಳಿ ನಿವಾಸಿ ಜಗದೀಶ್(30) ಮತ್ತು ಶಿವಾಜಿನಗರ ನಿವಾಸಿ ಮೊಹಮದ್ ಪೈಜ್ (18) ಸಾವನ್ನಪ್ಪಿದ್ದಾರೆ. ಅಬ್ಬಾಸ್ ಪಾಷಾ ಮತ್ತು ಅಬುಜರ್ ಗಾಯಾಳುಗಳಾಗಿದ್ದು ಹೊಸಕೋಟೆಯ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರ ಕುಟುಂಬಗಳಿಗೆ ನ್ಯಾಯ ಕೊಡಿಸುವಂತೆ ಶವಗಾರದ ಬಳಿ ಪ್ರತಿಭಟನೆ ನಡೆಸಲಾಗಿದೆ.

error: Content is protected !!