ಬಾಲಕಿಯ ತಲೆ ಕಡಿದು ರುಂಡದೊಂದಿಗೆ ಯುವಕ ನಾಪತ್ತೆ: ನಿಶ್ಚಿತಾರ್ಥ ಮುಂದೂಡಿಕೆಯಾದ ಕೋಪಕ್ಕೆ ಭೀಕರ ಹತ್ಯೆ: ಎಸ್ ಎಸ್ ಎಲ್ ಸಿ ಫಲಿತಾಂಶದ ಸಂತಸದಲ್ಲಿದ್ದ ಬಾಲಕಿ

ಕೊಡಗು: ಬಾಲಕಿಯನ್ನು ಹತ್ಯೆ ಮಾಡಿ ಆಕೆಯ ರುಂಡದ ಜೊತೆ ಯುವಕ ನಾಪತ್ತೆಯಾದ ಘಟನೆ ಕೊಡಗಿನಲ್ಲಿ ನಡೆದಿದೆ.

ಸೋಮವಾರಪೇಟೆಯ ಸುರ್ಲಬ್ಬಿಯ ಬಾಲಕಿಯನ್ನು ಇಷ್ಟಪಟ್ಟ ಪ್ರಕಾಶ್ (32) ಪ್ರೀತಿಸಲು ಆರಂಭಿಸಿದ್ದ. ಅಲ್ಲದೆ ಆ ಹುಡುಗಿಯನ್ನು ನನಗೆ ಮದುವೆ ಮಾಡಿಸಬೇಕು ಎಂದು ತನ್ನ ಮನೆಯವರಿಗೂ, ಹುಡುಗಿ ಮನೆಯವರಿಗೂ ಒತ್ತಡ ಹೇರಿದ್ದ. ಮನೆಮಂದಿ ಇದಕ್ಕೆ ಒಪ್ಪಿ ಆಕೆಗೆ ಮದುವೆ ವಯಸ್ಸು ತುಂಬಿದಾಗ ಮದುವೆ ಮಾಡಿಸುತ್ತೇವೆ ಎಂದಿದ್ದರAತೆ. ಆದರೆ ಇದ್ದಕ್ಕಿದ್ದಂತೆ ಆತ ನಿಶ್ಚಿತಾರ್ಥ ನಡೆಸಬೇಕು ಎಂದು ಒತ್ತಾಯ ಮಾಡಿದ್ದು, ಆತನ ಒತ್ತಾಯಕ್ಕೆ ಮಣಿದು ಮೇ.09ರಂದು ನಿಶ್ಚಿತಾರ್ಥಕ್ಕೂ ಸಿದ್ಧತೆ ನಡೆದಿತ್ತು.

ಅಪ್ರಾಪ್ತ ಬಾಲಕಿಯ ನಿಶ್ಚಿತಾರ್ಥ ವಿಷಯ ತಿಳಿದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಧ್ಯೆ ಪ್ರವೇಶಿಸಿ ನಿಶ್ಚಿತಾರ್ಥ ಮುಂದೂಡುವಂತೆ 2 ಮನೆಯವರನ್ನು ಒಪ್ಪಿಸಿದ್ದಾರೆ. ಇದಾದ ಬಳಿಕ ಯುವಕ ಸಾಯಂಕಾಲ 5.30ರ ವೇಳೆಗೆ ಬಾಲಕಿಯ ಮನೆಗೆ ನುಗ್ಗಿ ಬಾಲಕಿಯ ಪೋಷಕರ ಮೇಲೆ ಮಾರಕಾಸ್ತçಗಳಿಂದ ಹಲ್ಲೆ ಮಾಡಿದ್ದಾನೆ. ಅಲ್ಲದೆ ಮನೆಯೊಳಗಿಂದ ಬಾಲಕಿಯನ್ನು 100 ಮೀಟರ್ ವರೆಗೆ ಎಳೆದೊಯ್ದು ಅಲ್ಲಿ ಬಾಲಕಿಯ ತಲೆ ಕಡಿದು ಹತ್ಯೆ ಮಾಡಿ, ದೇಹವನ್ನು ಅಲ್ಲೆ ಬಿಟ್ಟು ತಲೆಯನ್ನು ತನ್ನೊಂದಿಗೆ ತೆಗೆದುಕೊಂಡು ನಾಪತ್ತೆಯಾಗಿದ್ದಾನೆ.

ಬಾಲಕಿಯ ದೇಹ ಮಾತ್ರ ಪತ್ತೆಯಾಗಿದ್ದು, ರುಂಡಕ್ಕಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಬಾಲಕಿಯ ತಾಯಿಗೆ ತೀವ್ರವಾದ ಗಾಯವಾಗಿದ್ದು, ತಂದೆಯ ಸಣ್ಣ ಪ್ರಮಾಣದ ಗಾಯವಾಗಿದೆ. ಆರೋಪಿಯ ವಿರುದ್ಧ ಪೋಕ್ಸೋ, ಕೊಲೆ ಪ್ರಕರಣ ದಾಖಲಿಸಿದ್ದು, ಬಂಧನಕ್ಕಾಗಿ ಬಲೆ ಬೀಸಿದ್ದೇವೆ ಎಂದು ಕೊಡಗು ಪೊಲೀಸರು ತಿಳಿಸಿದ್ದಾರೆ.
ಹತ್ಯೆಯಾದ ಬಾಲಕಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದು ನಿನ್ನೆ ಬಂದ ಫಲಿತಾಂಶದಲ್ಲಿ ಉತ್ತಮ ಅಂಕದೊAದಿಗೆ ಉತ್ತೀರ್ಣಳಾಗಿದ್ದಳು.

error: Content is protected !!