ಬೆಳ್ತಂಗಡಿ : ನಿಂತಿದ್ದ ಕಾರಿಗೆ ಗೂಡ್ಸ್ ವಾಹನ ಡಿಕ್ಕಿ : ಗಾಂಜಾ ಸೇವಿಸಿದ್ದ ಚಾಲಕ : ಕಾರ್ ಡ್ರೈವರ್ ಜೊತೆ ಕಿರಿಕ್ :ಚಾಲಕನ ಶೌಕತ್ ಅಲಿ ಮೇಲೆ ಸಾರ್ವಜನಿಕರಿಂದ ಹಿಗ್ಗಮುಗ್ಗ ಥಳಿತ: ಎರಡು ಪ್ರಕರಣ ದಾಖಲು..!

ಬೆಳ್ತಂಗಡಿ : ಮೀನು ಸಾಗಾಟದ ಗೂಡ್ಸ್ ವಾಹನವೊಂದು, ನಿಂತಿದ್ದ ಮಹಿಳೆಯೊಬ್ಬರ ಕಾರಿಗೆ ಡಿಕ್ಕಿ ಹೊಡೆದು ಬಳಿಕ ಮಹಿಳೆ ಜೊತೆ ಗೂಡ್ಸ್ ವಾಹನದ ಚಾಲಕ ಕಿರಿಕ್ ನಡೆಸಿ ಸಾರ್ವಜನಿಕರಿಂದ ಧರ್ಮದೇಟು ತಿಂದ ಘಟನೆ ಅ.2ರಂದು ಉಜಿರೆಯಲ್ಲಿ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಉಜಿರೆ ಚಾರ್ಮಾಡಿ ರಸ್ತೆಯ ಸುಝುಕಿ ಶೋಂ ಬಳಿ ಇರುವ ಮೀನು ಮಾರಾಟ ಅಂಗಡಿಗೆ ಮಂಗಳೂರು ಬಂದರಿನಿಂದ ಮೀನು ಸಾಗಾಟ ಮಾಡುತ್ತಿದ್ದ ಗೂಡ್ಸ್ ವಾಹನ ಚಾಲಕ ಬೆಳ್ತಂಗಡಿ ತಾಲೂಕಿನ ಕುವೆಟ್ಟು ಗ್ರಾಮದ ಮಟದಗುಡ್ಡೆ ನಿವಾಸಿ ಹಂಝ ಎಂಬವರ ಮಗ ಶೌಕತ್ ಆಲಿ (24) ಮಹಿಳೆಯೊಬ್ಬರ ಕಾರಿಗೆ ಡಿಕ್ಕಿ ಹೊಡೆದು ಅವರ ಜೊತೆಯೇ ಕಿರಿಕ್ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಸಾರ್ವಜನಿಕರು ಸಮಾಧಾನ ಪಡಿಸಲು ಯತ್ನಿಸಿದ್ದಾರೆ.


ಆದರೆ ಚಾಲಕ ಅವಾಚ್ಯ ಶಬ್ದಗಳಿಂದ ಬೈದು ಗೂಡ್ಸ್ ವಾಹನದಲ್ಲಿದ್ದ ರಾಡ್ ತೆಗೆದು ಹಲ್ಲೆಗೆ ಯತ್ನಿಸಿದ್ದು, ಈ ವೇಳೆ ಸಾರ್ವಜನಿಕರು ಸೇರಿ ಹಿಗ್ಗಮುಗ್ಗ ಥಳಿಸಿದ್ದಾರೆ. ಇದು ಇಷ್ಟಕ್ಕೆ ನಿಲ್ಲದೆ ಚಾಲಕ ಶೌಕತ್ ಆಲಿ ಬಳಿಕ ಮೀನು ಅಂಗಡಿಯಲ್ಲಿದ್ದ ಮಹಿಳೆಯ ಮಾನಭಂಗಕ್ಕೆ ಯತ್ನಿಸಿದ್ದಾನೆ. ಸ್ಥಳಕ್ಕೆ ಬಂದ ಬೆಳ್ತಂಗಡಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದ್ದು, ಆದರೆ ಚಾಲಕ ಶೌಕರ್ ಅಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ ಹಲ್ಲೆ ನಡೆಸಿದ ಸಾರ್ವಜನಿಕರ ಮೇಲೆ ದೂರು ನೀಡಿದ್ದ.

ಗೂಡ್ಸ್ ಚಾಲಕ ಗಾಂಜಾ ಸೇವನೆ ಮಾಡಿರುವ ಬಗ್ಗೆ ಬೆಳ್ತಂಗಡಿಪೊಲೀಸರಿಗೆ ಅನುಮಾನ ಬಂದಿದ್ದು ಇದರಿಂದ ವೈದ್ಯರಲ್ಲಿ ರಕ್ತ ಪರೀಕ್ಷೆ ಮಾಡಿಸಿ ಲ್ಯಾಬ್‍ಗೆ ಕಳುಹಿಸಿದಾಗ ಗಾಂಜಾ ಸೇವನೆ ಮಾಡಿದ್ದು ದೃಢ ಪಟ್ಟಿದೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ  2 ಪ್ರತ್ಯೇಕ ಪ್ರಕರಣ ದಾಖಲಾಗಿದೆ.

error: Content is protected !!