ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ ಪ್ರಖಂಡ: ಸೌಜನ್ಯಳ ನ್ಯಾಯಕ್ಕಾಗಿ ನೇತ್ರಾವತಿ ನದಿಯಿಂದ ಅಣ್ಣಪ್ಪ ಸ್ವಾಮಿ ಬೆಟ್ಟದವರೆಗೆ ಬೃಹತ್ ಪಾದಯಾತ್ರೆ ಆರಂಭ : ಸೌಜನ್ಯ ತಾಯಿ ಹಾಗೂ ಕುಟುಂಬಸ್ಥರು ಭಾಗಿ


ಧರ್ಮಸ್ಥಳ:
ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ ಪ್ರಖಂಡದಿಂದ ಸೌಜನ್ಯಳ ನ್ಯಾಯಕ್ಕಾಗಿ ಆಗ್ರಹಿಸಿ ನೇತ್ರಾವತಿ ನದಿಯಿಂದ ಅಣ್ಣಪ್ಪ ಸ್ಬಾಮಿ ಬೆಟ್ಟದವರೆಗೆ ಬೃಹತ್ ಪಾದಯಾತ್ರೆ ಆರಂಭವಾಗಿದೆ.

ಪಾದಯಾತ್ರೆಯಲ್ಲಿ ಸೌಜನ್ಯಾ ತಾಯಿ ಕುಸುಮಾವತಿ ಹಾಗೂ ಕುಟುಂಬಸ್ಥರು, ವಿಶ್ವ ಹಿಂದೂ ಪರಿಷತ್ ಬಜರಂಗದಳ ಬೆಳ್ತಂಗಡಿ ಪ್ರಖಂಡದ ಪ್ರಮುಖರು, ಸದಸ್ಯರು ಹಾಗು ನಾಗರಿಕರು ಪಾಲ್ಗೊಂಡಿದ್ದು ಶಿವ ಪಂಚಾಕ್ಷರಿ ಪಠಣ ಮಾಡುತ್ತ ಪಾದಾಯಾತ್ರೆ ಆರಂಭಿಸಿದ್ದಾರೆ. ಅಣ್ಣಪ್ಪ ಸ್ವಾಮಿಯ ಪಾದದ ಬಳಿಗೆ ಪಾದಯಾತ್ರೆ ಸಾಗಲಿದ್ದು ಶಾಂತಿ ಮಂತ್ರದೊಂದಿಗೆ ಕೊನೆಗೊಳ್ಳಲಿದೆ.

error: Content is protected !!