ಮಾ.30 ಹಾಗೂ 31ರಂದು ಪಿಲಿಪಂಜರ ಬೆಟ್ಟದಲ್ಲಿ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ: 900 ವರ್ಷಗಳ ಇತಿಹಾಸವಿರುವ ಸ್ಥಳಕ್ಕೆ ಮತ್ತೆ ಜೀವಕಳೆ..!: ಶ್ರೀ ಉಳ್ಳಾಕ್ಕುಲು, ಶ್ರೀ ಉಳ್ಳಾಲ್ತಿ, ಮೈಸಂದಾಯ, ಪಂಜುರ್ಲಿ, ಗುಳಿಗ ದೈವಗಳ ನೇಮೋತ್ಸವ

ಬೆಳ್ತಂಗಡಿ : ಲಾಯಿಲ ಗ್ರಾಮದ ಪಿಲಿಪಂಜರ ಬೆಟ್ಟದಲ್ಲಿ ಮಾ.30 ಹಾಗೂ 31ರಂದು ಶ್ರೀ ಉಳ್ಳಾಕ್ಕುಲು, ಶ್ರೀ ಉಳ್ಳಾಲ್ತಿ, ಮೈಸಂದಾಯ, ಪಂಜುರ್ಲಿ, ಗುಳಿಗ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ 31ರಂದು ಸಂಜೆ 6ರಿಂದ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಸಮಿತಿ  ಅಧ್ಯಕ್ಷ ಸಂಜೀವ ಶೆಟ್ಟಿ‌ ಕುಂಠಿನಿ ಹೇಳಿದರು.

ಮಾ. 21 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಪರಮಪೂಜ್ಯ ಡಾ.ಡಿ ವೀರೇಂದ್ರ ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ , ಕ್ಷೇತ್ರದ ತಂತ್ರಿಗಳಾದ ಕಡೇಶಿವಾಲಯ ವೇದಮೂರ್ತಿ ಶ್ರೀ ಪಚ್ಚಡಿಬೈಲು ಪಿ ಸುಬ್ರಹ್ಮಣ್ಯ ತಂತ್ರಿಗಳ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನೆರವೇರಲಿದೆ. ಮಾ.30 ರಂದು ಸಂಜೆ 5 ಗಂಟೆಗೆ ಶ್ರೀ ಕ್ಷೇತ್ರಕ್ಕೆ ತಂತ್ರಿಗಳು ಮತ್ತು ಪರಿವಾರ ಆಗಮನ, ಸಂಜೆ 6 ಗಂಟೆಗೆ ಶಿಲ್ಪಿಯವರಿಂದ ಹಾಗೂ ವಿಶ್ವಕರ್ಮರಿಂದ ಪ್ರಸಾದ ಮತ್ತು ದೈವಗಳ ಮಂಚಮಗಳ ಪರಿಗ್ರಹ ಆಚರ‍್ಯವರಣೆ, ಯತ್ವಿಗರಣೆ ಜರುಗಲಿದ್ದು, ಬಳಿಕ ತೋರಣ ಮುಹೂರ್ತ, ಸಾಮೂಹಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ವಾಚನ, ಸಪ್ತಶುದ್ಧಿ ಪ್ರಾಸಾದ ಶುದ್ಧಿ, ಗೋಪೂಜೆ, ಬಿಂಬಾಧಿವಾಸ, ಬಿಂಬಶುದ್ಧಿ, ರಕ್ಷೋಘ್ನ ಹೋಮ, ವಾಸ್ತು ಪೂಜೆ, ಭೂವರಾಹಹೋಮ, ಅಷ್ಟದಿಕ್ ಬಲಿ ಬಳಿಕ ಪ್ರಸಾದ ವಿತರಣೆ ನಡೆಯಲಿದೆ. ಮಾ.31ರಂದು ದೈವಗಳ ಪ್ರತಿಷ್ಠೆ, ಪರ್ವಾದಿಗಳ ಸೇವೆ, ಸಂಜೆ 3ಕ್ಕೆ ಭಂಡಾರ ಇಳಿಸುವುದು ನಂತರ 6 ಗಂಟೆಯಿಂದ ದೈವಗಳಿಗೆ ನೇಮೋತ್ಸವ ನಡೆಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಪುಷ್ಪರಾಜ್ ಕೋಶಾಧಿಕಾರಿ ಗಿರೀಶ್ ಡೋಂಗ್ರೆ, ಪ್ರಧಾನ‌ ಕಾರ್ಯದರ್ಶಿ ಪ್ರಕಾಶ್ ಕಾಶಿಬೆಟ್ಟು, ಲಕ್ಷ್ಮಣ್ ಜಿ,ಎಸ್ ಎಳಚಿತ್ತಾಯನಗರ, ರಮೇಶ್ ಆರ್ ಲಾಯಿಲ, ಗಣೇಶ್ ಆರ್, ಅರವಿಂದ ಶೆಟ್ಟಿ ರಾಘವೇಂದ್ರ ನಗರ ಉಪಸ್ಥಿತರಿದ್ದರು.

error: Content is protected !!