ಎಳನೀರು ಟ್ರ್ಯಾಕ್ಟರ್ ಪಲ್ಟಿ ಓರ್ವ ಸಾವು ಇಬ್ಬರಿಗೆ ಗಾಯ: ಕಾಮಗಾರಿಗೆ ಸಾಮಾಗ್ರಿ ಸಾಗಿಸುತಿದ್ದಾಗ ದುರ್ಘಟನೆ..!

 

 

 

ಬೆಳ್ತಂಗಡಿ :ಕಾಮಗಾರಿ ನಡೆಯುವಲ್ಲಿಗೆ ಸಾಮಾಗ್ರಿ ಸಾಗಿಸುತಿದ್ದಾಗ ಟ್ರ್ಯಾಕ್ಟರ್ ಉರುಳಿ ಬಿದ್ದು ಓರ್ವ ಸಾವನ್ನಪ್ಪಿ ಇಬ್ಬರು ಗಾಯಗೊಂಡ ಘಟನೆ ಇಂದು ಎಳನೀರು ಸಮೀಪ  ನಡೆದಿದೆ.

ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಎಳನೀರಿನ ಬಂಗಾರಪಲ್ಕೆ ಎಂಬಲ್ಲಿ  ಕಿಂಡಿ ಅಣೆಕಟ್ಟಿನ ತಡಗೋಡೆ ನಿರ್ಮಾಣದ ಕಾಮಗಾರಿಗೆ ಸಾಮಗ್ರಿ ಸಾಗಿಸುತ್ತಿದ್ದ ವೇಳೆ ಟ್ರಾಕ್ಟರ್ ಪಲ್ಟಿಯಾಗಿ ಸಮೀಪದ ತೋಟಕ್ಕೆ ಉರುಳಿಬಿದ್ದಿದೆ ಈ ವೇಳೆ  ಓರ್ವ ಸಾವನ್ನಪ್ಪಿದ್ದಲ್ಲದೆ ಇಬ್ಬರು  ಗಾಯಗೊಂಡಿದ್ದಾರೆ.  ಅದರಲ್ಲೂ ಒಬ್ಬರಿಗೆ ಗಂಭೀರ ಗಾಯಗಳಾಗಿವೆ ಮೃತ ವ್ಯಕ್ತಿ
ಚಿಕ್ಕಮಗಳೂರು ಜಿಲ್ಲೆಯ ಸಂಸೆಯ ಎಸ್.ಕೆ.ಮೇಗಲ್ ನಿವಾಸಿ ಅಶೋಕ್ ಎಂಬವರು ಎಂದು ತಿಳಿದು ಬಂದಿದೆ.

ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಾಗಿದೆ.

error: Content is protected !!