ಕೋಳಿಗೂಡಿಗೆ ನುಗ್ಗಿದ್ದ ಹೆಬ್ಬಾವು..! ಪೈತಾನನ್ನು ಹಿಡಿದು ಕಾಡಿಗೆ ಬಿಟ್ಟ ಉರಗ ರಕ್ಷಕ ಪ್ರೇಮ್ ಸಾಗರ್

ಬೆಳ್ತಂಗಡಿ: ಕಾಶಿಬೆಟ್ಟುವಿನ ಅರಳಿಯ ಸೂರಪ್ಪ ಪೂಜಾರಿಯವರ ಮನೆಯಲ್ಲಿ ಮುಂಜಾನೆ ವೇಳೆ ಹೆಬ್ಬಾವೊಂದು ಕೋಳಿಗೂಡಿನಲ್ಲಿರುವುದು ಪತ್ತೆಯಾಗಿದೆ.
ಬೆಳಗ್ಗೆ ಸುಮಾರು 6:30 ರ ವೇಳೆಗೆ ತನ್ನ ಬೇಟೆ ಹುಡುಕಿಕೊಂಡು ಬಂದ ಹೆಬ್ಬಾವು ಕೋಳಿಗೋಡಿಗೆ ನುಗ್ಗಿತ್ತು.
ಈ ವೇಳೆ ಮನೆಯವರು ಉರಗ ರಕ್ಷಕ ಪ್ರೇಮ್ ಸಾಗರ್ ರವರಿಗೆ ಕರೆ ಮಾಡಿ ಮಾಹಿತಿ‌ ನೀಡಿದ್ದಾರೆ. ತಕ್ಷಣವೇ ಸ್ಥಳಕ್ಕೆ ಬಂದ ಪ್ರೇಮ್ ಸಾಗರ್ ಹೆಬ್ಬಾವನ್ನು ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.‌

error: Content is protected !!