ಮಕ್ಕಳು ಸಿಡಿಸಿದ ಪಟಾಕಿ ಕಿಡಿಗೆ ಹೊತ್ತಿ ಉರಿದ ಬೋಟ್: ಮಂಗಳೂರು ಲಂಗರು ಹಾಕಿದ್ದ 3 ಬೋಟ್ ಗಳು ಬೆಂಕಿಗಾಹುತಿ:

 

ಮಂಗಳೂರು: ಮಕ್ಕಳು ಸಿಡಿಸಿದ ದೀಪಾವಳಿ ಪಟಾಕಿಯ ಕಿಡಿಯಿಂದ ನಗರದ ಬೆಂಗ್ರೆಯಲ್ಲಿ ಲಂಗರು ಹಾಕಲಾಗಿದ್ದ 3 ಬೋಟ್‌ಗಳು ಬೆಂಕಿಗಾಹುತಿಯಾದ ಘಟನೆ ಇಂದು ನಡೆದಿದೆ.

ಲಕ್ಷ ದ್ವೀಪಕ್ಕೆ ಕಾರ್ಗೋ ಸಾಗಿಸುವ ಬೋಟ್​​ಗಳನ್ನು ಮಂಗಳೂರಿನ ಬೆಂಗ್ರೆಯಲ್ಲಿ ದುರಸ್ತಿಗಾಗಿ ಲಂಗರು ಹಾಕಲಾಗಿತ್ತು. ಇಲ್ಲಿ ಒಟ್ಟೊಟ್ಟಿಗೆ ಮೂರು ಬೋಟ್​​ಗಳು ಇದ್ದು, ಇದರ ಪಕ್ಕದಲ್ಲಿಯೆ ಮಕ್ಕಳು ಪಟಾಕಿ ಸಿಡಿಸಿದ್ದಾರೆ. ಆದರೆ ಪಟಾಕಿಯ ಕಿಡಿ ಬೋಟ್​​ನೊಳಗೆ ಬಿದ್ದು ಅನಾಹುತವಾಗಿದೆ.ಮೂರು ಬೋಟ್​​ಗಳಲ್ಲಿ ಒಂದು ಬೋಟ್​​ನಲ್ಲಿ ಡೀಸೆಲ್ ತುಂಬಿತ್ತು. ಪಟಾಕಿಯ ಕಿಡಿಗೆ ಬೆಂಕಿ ಜ್ವಾಲೆಯಾಗಿ ಹಬ್ಬಿ ಪಕ್ಕದಲ್ಲಿದ್ದ ಎರಡು ಬೋಟ್​​ಗಳು ಆಹುತಿಯಾಗಿವೆ. ಸಂಜೆ 5 ಗಂಟೆಗೆ ತಗುಲಿದ ಬೆಂಕಿಯನ್ನು ಸುಮಾರು ನಾಲ್ಕು ಗಂಟೆಗಳ ಕಾಲ ಕಾರ್ಯಾಚರಣೆ ಮಾಡಿ ನಂದಿಸಲಾಗಿದೆ. ಮಂಗಳೂರಿನ ಪಾಂಡೇಶ್ವರ, ಕದ್ರಿ ಅಗ್ನಿ ಶಾಮಕ ದಳದ ವಾಹನ, ಸ್ಥಳೀಯ ಕೈಗಾರಿಕಾ ಸಂಸ್ಥೆಗಳ ಹತ್ತು ವಾಹನಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.

error: Content is protected !!