ಇಳಂತಿಲ: ಅಪಾಯಕಾರಿ ಮರ ತೆರವು: ಪ್ರಜಾಪ್ರಕಾಶ ನ್ಯೂಸ್ ವರದಿಗೆ ಸ್ಪಂದಿಸಿದ ಅಧಿಕಾರಿಗಳು

 

ಬೆಳ್ತಂಗಡಿ: ಇಳಂತಿಲ ಸಮೀಪದ ಕನ್ಯಾರಕೋಡಿ ಎಂಬಲ್ಲಿ ರಸ್ತೆ ಬದಿ ಅಪಾಯಕಾರಿ ಮರವೊಂದು ಬೀಳುವ ಸ್ಥಿತಿಯಲ್ಲಿದ್ದು ಈ ಬಗ್ಗೆ ‘ಪ್ರಜಾಪ್ರಕಾಶ ನ್ಯೂಸ್’ ಅಪಾಯದಂಚಿನಲ್ಲಿದ್ದ ಈ ಮರ ಒಂದು ವೇಳೆ ಉರುಳಿ ಬಿದ್ದಲ್ಲಿ ಆಗುತ್ತಿದ್ದ ಅನಾಹುತದ ಬಗ್ಗೆ ಕಳೆದ ಎರಡು ದಿನಗಳ ಹಿಂದೆ  ವಿಶೇಷ ವರದಿಯ ಮೂಲಕ ಸಂಬಂಧ ಪಟ್ಟ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸ ಮಾಡಿತ್ತು.

 

 

 

 

 

ವರದಿಗೆ ಸ್ಪಂದಿಸಿದ ಅರಣ್ಯ ಇಲಾಖೆಯವರು ಪಂಚಾಯಿತಿ ಹಾಗೂ ಸ್ಥಳೀಯರ ಸಹಕಾರದಲ್ಲಿ ಮರವನ್ನು ತೆರವುಗೊಳಿಸಿದ್ದಾರೆ. ಸ್ಥಳೀಯರು ಈ ಬಗ್ಗೆ  ‘ಪ್ರಜಾಪ್ರಕಾಶ’ ತಂಡಕ್ಕೆ ಹಾಗೂ ವರದಿಯ ಮಾಹಿತಿ ಸಿಕ್ಕಿದ ಕೂಡಲೇ ಎಚ್ಚೆತ್ತು ತೆರವುಗೊಳಿಸಿದ ಅಧಿಕಾರಿಗಳಿಗೂ ಗ್ರಾಮ ಪಂಚಾಯಿತಿಗೂ ಧನ್ಯವಾದ ತಿಳಿಸಿದ್ದಾರೆ.

 

ಮರ ತೆರವುಗೊಳಿಸುವ ವೇಳೆ ಮೆಸ್ಕಾಂ ಸಿಬ್ಬಂದಿಗಳು  ಪಂಚಾಯತ್ ಸದಸ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

ಇದನ್ನೂ ಓದಿ:

 

ದುರಂತ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಬೇಕಿದೆ ಅಧಿಕಾರಿಗಳು: ಇಳಂತಿಲದಲ್ಲಿದೆ ಅಪಾಯಕಾರಿ ಮರ : ತೆರವುಗೊಳಿಸದಿದ್ದಲ್ಲಿ ನಡೆಯಬಹುದು ದೊಡ್ಡ ಅಪಾಯ.

 

 

 

 

 

 

 

 

error: Content is protected !!