ಉಕ್ರೇನ್ ನಿಂದ ದೆಹಲಿಗೆ ಬಂದಿಳಿದ ಉಜಿರೆಯ ಹೀನಾ ಫಾತಿಮಾ

 

 

ಬೆಳ್ತಂಗಡಿ : ಉಕ್ರೇನ್ ನ ಖಾರ್ಕಿವ್ ನಲ್ಲಿ ಸಿಲುಕಿದ್ದ ವೈದ್ಯ ವಿದ್ಯಾರ್ಥಿನಿ ಬೆಳ್ತಂಗಡಿ ತಾಲೂಕಿನ ಉಜಿರೆಯ ಟಿ.ಬಿ.ಕ್ರಾಸ್ ನ ದಿ.ಯಾಸೀನ್ ಮತ್ತು ಶಹನಾ ದಂಪತಿಯ ಪುತ್ರಿ ಹೀನಾ ಫಾತಿಮಾ ನಿನ್ನೆ ರಾತ್ರಿ ಪೋಲಂಡ್ ನಿಂದ ವಿಮಾನ ಮೂಲಕ ಇಂದು ಬೆಳಗ್ಗೆ 7 ಗಂಟೆಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಸುರಕ್ಷಿತವಾಗಿ ಬಂದಿಳಿದಿದ್ದಾರೆ  ದೆಹಲಿಯ ಕರ್ನಾಟಕ ಭವನದಲ್ಲಿ ಅವರಿಗೆ ಎಲ್ಲ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಈಗಾಗಲೇ ಕೊಡಗು, ಬೆಂಗಳೂರಿನವರು ಸೇರಿದಂತೆ ಕರ್ನಾಟಕದ ಮೂರು ಮಂದಿ ಇವರೊಂದಿಗಿದ್ದಾರೆ ಸಂಜೆ 4 ಗಂಟೆಗೆ ದೆಹಲಿಯಿಂದ  ಬೆಂಗಳೂರಿಗೆ  ಅಲ್ಲಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಅಗಮಿಸಿ ಮಂಗಳೂರಿನಲ್ಲಿ ಇರುವ ಅವರ ಸಂಬಂಧಿಕರ ಮನೆಗೆ ಬಂದ್ದು ನಾಳೆ ಅಲ್ಲಿಂದ ತನ್ನ ಉಜಿರೆ ಮನೆಗೆ  ಬರಲಿದ್ದಾರೆ ಎಂದು ಹೀನಾ ಫಾತೀಮಾ ಅವರ ಮಾವ ಉಜಿರೆಯ ಅಬೀದ್ ಆಲಿ ಪ್ರಜಾಪ್ರಕಾಶ ನ್ಯೂಸ್ ಗೆ ಮಾಹಿತಿ ನೀಡಿದ್ದಾರೆ.

error: Content is protected !!