75 ನೇ ಸ್ವಾತಂತ್ರ್ಯ ದಿನಾಚರಣೆ: ನಡ ಬಿಜೆಪಿ ಬೂತ್ ಸಮಿತಿಯಿಂದ ಸ್ವಚ್ಚತಾ ಕಾರ್ಯಕ್ರಮ

ನಡ: ಭಾರತೀಯ ಜನತಾ ಪಾರ್ಟಿ ನಡ ಬೂತ್ ಸಮಿತಿ 36 ಇದರ ವತಿಯಿಂದ 75ನೇ ವರ್ಷದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಲಾಯಿಲ-ಕಿಲ್ಲೂರು ರಸ್ತೆಯ ಹೊಕ್ಕಿಲದಿಂದ ಕುತ್ರೊಟ್ಟುವರೆಗೆ ಹಾಗೂ ಕುತ್ರೊಟ್ಟು-ಟಿ.ಬಿ.ಕ್ರಾಸ್ ರಸ್ತೆಯ ಕುತ್ರೊಟ್ಟುವಿನಿಂದ ಕುಂಠಿನಿವರೆಗೆ ಸ್ವಚ್ಛತಾ ಕಾರ್ಯ ನಡೆಸಲಾಯಿತು.

ಈ ಸಂದರ್ಭದಲ್ಲಿ ನಡ ಗ್ರಾ.ಪಂ. ಅಧ್ಯಕ್ಷರಾದ ಎ.ವಿಜಯ ಗೌಡ, ಉಪಾಧ್ಯಕ್ಷರಾದ ವಿನುತ ಶೆಟ್ಟಿ, ಪಂ.ಸದಸ್ಯರಾದ ಸುಮಿತ್ರಾ,ಮಮತಾ,ಪಂ.ಸದಸ್ಯರು ಹಾಗೂ ಬೂತ್ ಸಮಿತಿ 36 ರ ಅಧ್ಯಕ್ಷರಾದ ಚಂದ್ರಹಾಸ ಗೌಡ ಹೊಕ್ಕಿಲ, ಕಾರ್ಯದರ್ಶಿಯಾದ ದಯಾನಂದ ಗೌಡ, ಲಾಯಿಲ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಅಜಿತ್ ಕುಮಾರ್ ಆರಿಗ, ಬೂತ್ ಸಮಿತಿ 37ರ ಅಧ್ಯಕ್ಷರಾದ ಜನಾರ್ಧನ ಗೌಡ, ಕಾರ್ಯದರ್ಶಿ ರಮೇಶ್ ಬಂಗೇರ ಹಾಗೂ 36ನೇ ಬೂತ್‍ನ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದರು.

ಈ ಕಾರ್ಯಕ್ಕೆ ವಾಹನ ವ್ಯವಸ್ಥೆಯನ್ನು ಪ್ರಕಾಶ್ ಪಿರೇರಾ ಇವರು ಉಚಿತವಾಗಿ ನೀಡಿದರು.

error: Content is protected !!