ಮಂಜುಶ್ರೀ ಸೀನಿಯರ್ ಚೆಂಬರ್ ಪದಗ್ರಹಣ ಕಾರ್ಯಕ್ರಮ

ಬೆಳ್ತಂಗಡಿ: ಮಂಜುಶ್ರೀ ಸೀನಿಯರ್ ಚೇಂಬರ್‌ನ 2021-22ನೇ ಸಾಲಿನ ಪದಗ್ರಹಣ ಸಮಾರಂಭವು ಅ.13 ಶುಕ್ರವಾರ ಕೋವಿಡ್ ನಿಯಮ ಪಾಲಿಸಿ ಸರಳವಾಗಿ ಬೆಳ್ತಂಗಡಿ ಪರಿಕ್ರಮ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ನೂತನ ಅಧ್ಯಕ್ಷ ಲ್ಯಾನ್ಸಿ ಎ.ಪಿರೇರಾರವರಿಗೆ ಇಂಡಿಯನ್ ಸೀನಿಯರ್ ಛೇಂಬರ್‌ನ ಪೂರ್ವ ನಿರ್ದೇಶಕ ಪ್ರಮೋದ್ ಆರ್ ನಾಯಕ್‌ರವರು ಪ್ರಮಾಣ ವಚನ ಬೋದನೆ ಮಾಡಿದರು. ನಂತರ ಕಾರ್ಯದರ್ಶಿ, ಕೋಶಾಧಿಕಾರಿ ಹಾಗೂ ಪದಾಧಿಕಾರಿಗಳಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು.

ನೂತನ ಅಧ್ಯಕ್ಷ ಲ್ಯಾನ್ಸಿ ಎ.ಪಿರೇರಾರವರು ಈ ವರ್ಷದ ಎಲ್ಲರ ಸಹಕಾರದಲ್ಲಿ ವಿವಿಧ ಕಾರ್ಯಕ್ರಮ ನಡೆಸುವ ಬಗ್ಗೆ ಮಾಹಿತಿ ನೀಡಿದರು .ನಿರ್ಗಮನ ಅಧ್ಯಕ್ಷ ವಿಶ್ವನಾಥ ಶೆಟ್ಟಿಯವರು ಕಳೆದ ವರ್ಷ ಸದಸ್ಯರು ಸಹಕಾರ ನೀಡಿದಕ್ಕೆ ಮೆಚ್ಚುಗೆ ವ್ಯಕ್ತ ಪಡಿಸಿದರು. ಕಾರ್ಯಕ್ರಮದಲ್ಲಿ ನಿರ್ದೇಶಕರು ಮತ್ತು ಸದಸ್ಯರು ಉಪಸ್ಥಿತರಿದ್ದರು. ಕಾರ್ಯದರ್ಶಿ ಹರೀಶ್ ಶೆಟ್ಟಿ ವಂದಿಸಿದರು.

error: Content is protected !!