ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ ಮೇಲ್ದರ್ಜೆಗೇರಿಸಲು ಕ್ರಮ: ಜಿಲ್ಲೆಯಲ್ಲಿ ಉತ್ಕೃಷ್ಟ ಮಟ್ಟದ ಆರೋಗ್ಯ ಸೇವೆ ದೊರೆಯಲು ಕ್ರಮ: ಸಚಿವ ಡಾ. ಸುಧಾಕರ್ ಹೇಳಿಕೆ: ಕೊಕ್ಕಡ‌ ಸಮುದಾಯ ಆರೋಗ್ಯ ಕೇಂದ್ರ, ಚಾರ್ಮಾಡಿ ಆರೋಗ್ಯ ಕೇಂದ್ರ ಉದ್ಘಾಟನೆ: ಎಂಡೋ ಪೀಡಿತರ ಸಮಸ್ಯೆ ಆಲಿಸಿ, ಬೇಡಿಕೆ ಈಡೇಡಿಸುವ ಭರವಸೆ: ತಾಲೂಕಿಗೆ ‌ಎರಡು‌ ಹೊಸ ಆಂಬ್ಯುಲೆನ್ಸ್ ಗಳ ಸೇರ್ಪಡೆ

ಬೆಳ್ತಂಗಡಿ: ರಮೇಶ್ ಜಾರಕಿಹೊಳಿ ರಾಜೀನಾಮೆ ಬಗ್ಗೆ ನಾವು 17 ಮಂದಿ ಜೊತೆಯಾಗಿ ಕುಳಿತು ಮಾತನಾಡಿಲ್ಲ. ಅದರೆ ಜಾರಕಿಹೋಳಿಯವರು ವಯಕ್ತಿಕವಾಗಿ ನನ್ನಲ್ಲಿ ಮಾತನಾಡಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.‌ಕೆ. ಸುಧಾಕರ್ ಹೇಳಿದರು. ಅವರು ಬೆಳ್ತಂಗಡಿ ತಾಲೂಕಿನ ಕೊಕ್ಕಡದಲ್ಲಿ ಸಮುದಾಯ ಆರೋಗ್ಯ ಕೇಂದ್ರ ಉದ್ಘಾಟಿಸಿ‌ ಮಾಧ್ಯಮದ ಜೊತೆ ಮಾತನಾಡಿದರು.

ಮಂಗಳೂರಿನ ಜಿಲ್ಲೆಯ ಕೇಂದ್ರ ಆರೋಗ್ಯ ಆಸ್ಪತ್ರೆಯಾದ ವೆನ್ ಲಾಕ್ ಅನ್ನು‌ ಮೆಲ್ದರ್ಜೆಗೆರಿಸಿ ಹಾಗೂ ಇಡೀ ಜಿಲ್ಲೆಯಲ್ಲೇ ಉತ್ಕೃಷ್ಟ ಮಟ್ಟದ ಆರೋಗ್ಯ ಸೇವೆಗಳನ್ನು ನೀಡುವ ಬಗ್ಗೆ ಉಸ್ತುವಾರಿ ಸಚಿವರು ಅನೇಕ ಬಾರಿ ಮನವಿ ಮಾಡಿದ್ದು ಈ ನಿಟ್ಟಿನಲ್ಲಿ ಈಗಾಗಲೇ ಅವರೊಟ್ಟಿಗೆ ಸೇರಿ ಮಾತನಾಡಿ ಕೊಂಡು ಎಲ್ಲಾ ವೈದ್ಯರ ನೇಮಕ ಮಾಡಲಾಗಿದೆ. ಎಲ್ಲಾ ಮುಂದಿನ ದಿನಗಳಲ್ಲಿ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಪ್ರಾಥಮಿಕ ಚಿಕಿತ್ಸಾ ಕೇಂದ್ರವನ್ನು ಮೆಲ್ದರ್ಜೆಗೆರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಬೆಳ್ತಂಗಡಿ ತಾಲೂಕಿನ ಪಡಂಗಡಿಯಲ್ಲಿ ಈಗಾಗಲೇ ವಸುಧಾ ಮಾದರಿ ಪ್ರಾಥಮಿಕ ಚಿಕಿತ್ಸಾ ಕೇಂದ್ರದ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದರು.

ಎಂಡೋ ಪೀಡಿತರ ಸಮಸ್ಯೆಗೆ ಸ್ಪಂದನೆ: 

ಆಸ್ಪತ್ರೆ ಕಟ್ಟಡದ ಉದ್ಘಾಟನೆ ನಂತರ ‌ಎಂಡೋಸಲ್ಫಾನ್ ಪೀಡಿತರ ಪುನಶ್ಚೇತನ ಕೇಂದ್ರಕ್ಕೆ ಭೇಟಿ ನೀಡಿದ ಸಚಿವರು ಎಂಡೋಪೀಡಿತರ ಕ್ಷೇಮ ಸಮಾಚಾರ ವೀಕ್ಷಿಸಿದರು. ಹೋರಾಟಗಾರ ಶ್ರೀಧರ್ ಗೌಡ ಕೆಂಗುಡೇಲ್ ಅವರು ನೀಡಿದ ಮನವಿಗೆ ಸ್ಪಂದಿಸಿದ ಸಚಿವರು ತಕ್ಷಣ ಕ್ರಮ ಕೈಗೊಳ್ಳುವ ಬಗ್ಗೆ ತಿಳಿಸಿದರು. ಮುಖ್ಯವಾಗಿ‌ ಕರ್ನಾಟಕ ಕೇರಳ ಗಡಿ ಭಾಗಗಳಲ್ಲಿ ಹೂತಿಟ್ಟಿರುವ ಎಂಡೋ ಬ್ಯಾರಲ್ ಗಳಿಂದ ಸಮಸ್ಯೆಯಾಗುತ್ತಿದ್ದು ವಿಲೇವಾರಿಗೆ ಕ್ರಮ ಕೈಗೊಳ್ಳಲು ಕೇಳಿಕೊಂಡಾಗ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ.

ಸೌತಡ್ಕ, ಹೊರಾಂಗಣದಲ್ಲಿ ‌ಪ್ರಾರ್ಥನೆ: 

ಡಾ. ಸುಧಾಕರ್ ಅವರು ‌ಸೌತಡ್ಕ ಮಹಾಗಣಪತಿ ದೇವಾಲಯಕ್ಕೆ ಭೇಟಿ ನೀಡಿ ಕೋವಿಡ್ ನಿಯಮದಂತೆ ದೇಗುಲ ಮುಚ್ಚಿದ್ದರಿಂದ ಹೊರಾಂಗಣದಿಂದಲೇ ಪ್ರಾರ್ಥನೆ ಸಲ್ಲಿಸಿದರು. ಬಳಿಕ‌ ತಾಲೂಕಿಗೆ ‌ಎರಡು‌ ಆಂಬ್ಯುಲೆನ್ಸ್ ಗಳನ್ನು ಲೋಕಾರ್ಪಣೆ ಮಾಡಿದರು.

ಕಾರ್ಯಕ್ರಮದಲ್ಲಿ ದ.ಕ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಪುತ್ತೂರು ಉಪವಿಭಾಗಧಿಕಾರಿ ಯತೀಶ್ ಉಲ್ಲಾಳ್, ಡಿಎಚ್ ಒ ಡಾ.‌ಕಿಶೋರ್ ಎಂ, ಜಿ.ಪಂ ಸಿಇಒ ಡಾ. ಕುಮಾರ್ , ತಹಶೀಲ್ದಾರ್ ಮಹೇಶ್ ಜೆ., ಇ.ಒ. ಕುಸುಮಾಧರ್, ತಾಲೂಕು ಆರೋಗ್ಯಾಧಿಕಾರಿ ಡಾ. ಕಲಾಮಧು, ಸಿಡಿಪಿಒ ಪ್ರಿಯಾ ಆಗ್ನೇಸ್, ಕೊಕ್ಕಡ ಗ್ರಾ.ಪಂ ಅಧ್ಯಕ್ಷ ಯೋಗೀಶ್ ಆಲಂಬಿಲ, ಚಾರ್ಮಾಡಿ ಗ್ರಾ.ಪಂ ಅಧ್ಯಕ್ಷ ಕೆ.ವಿ. ಪ್ರಸಾದ್, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್, ತಾಲೂಕು ಬಿಜೆಪಿ ಅಧ್ಯಕ್ಷ ಜಯಂತ ಕೋಟ್ಯಾನ್, ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು. ಕೊಕ್ಕಡದಿಂದ ನೇರವಾಗಿ ಚಾರ್ಮಾಡಿಗೆ ತೆರಳಿ ಅಲ್ಲಿ ಪ್ರಾಥಮಿಕ ಕೇಂದ್ರ ಲೋಕಾರ್ಪಣೆಗೊಳಿಸಿ ತಮ್ಮ ಖಾಸಗಿ‌ ವಾಹನದಲ್ಲಿ ಬೆಂಗಳೂರಿಗೆ ಹಿಂತಿರುಗಿದರು.

error: Content is protected !!