ಸ್ಪಂದನಾ ಸೇವಾ ಸಂಘದಿಂದ ಧನ ಸಹಾಯ: ₹ 15 ಸಾವಿರದ ಚೆಕ್ ಹಸ್ತಾಂತರ

ಬೆಳ್ತಂಗಡಿ: ಕ್ಯಾನ್ಸರ್ ನಿಂದ ಬಳಲುತ್ತಿರುವ ಉಜಿರೆ ಗ್ರಾಮದ ಮುಂಡತ್ತೋಡಿ ಪೂರ್ಣಿಮಾ ಅವರಿಗೆ ಚಿಕಿತ್ಸಾ ಸಹಾಯಾರ್ಥವಾಗಿ ಬೆಳ್ತಂಗಡಿ ಸ್ಪಂದನಾ ಸೇವಾ ಸಂಘದಿಂದ ಧನ ಸಹಾಯ ಮಾಡಲಾಯಿತು.

ಸಂಘದ ಪರವಾಗಿ 15 ಸಾವಿರ ರೂ.ಗಳ ಚೆಕ್ಕನ್ನು ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿರ್ದೇಶಕಿ ಉಷಾದೇವಿ ಕಿನ್ಯಾಜೆ ಅವರ ಮೂಲಕ ಫಲಾನುಭವಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ನಿಕಟ ಪೂರ್ವ ಪ್ರಧಾನ ಕಾರ್ಯದರ್ಶಿ ಮೋಹನ್ ಗೌಡ ಕೊಯ್ಯೂರು, ನಿಕಟಪೂರ್ವ ನಿರ್ದೇಶಕ ಆನಂದ ಗೌಡ ಉಜಿರೆ, ವಾಣಿ ಸೌಹಾರ್ದ ಕೋ-ಆಪರೇಟಿವ್ (ಲಿ.) ನಿರ್ದೇಶಕ ಗೋಪಾಲಕೃಷ್ಣ ಜಿ.ಕೆ ಉಜಿರೆ, ಸುರೇಶ್ ಕೌಡಂಗೆ, ತಾಲೂಕು ಯುವ ವೇದಿಕೆ ನಿರ್ದೇಶಕರಾದ ತಿಕ್ಷೀತ್ ದಿಡುಪೆ, ನಿತಿನ್ ಗೌಡ ಕನ್ಯಾಡಿ, ಉಜಿರೆ ಗ್ರಾಮ ಸಮಿತಿ ಕಾರ್ಯದರ್ಶಿ ಧರ್ಣಪ್ಪ ಗೌಡ ಧರಣಿ ಉಜಿರೆ, ಸ್ಪಂದನಾ ಸೇವಾ ಸಂಘದ ಸದಸ್ಯ ಉಮೇಶ್ ಗೌಡ ಮೈರ್ನೋಡಿ, ಗ್ರಾಮದ ವಿಜಯ ಗೌಡ ಮುಂಡತ್ತೋಡಿ, ಜಯಂತ ಗೌಡ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

error: Content is protected !!