ಲಾಯಿಲ ಉತ್ಸಾಹಿ ಯುವಕ ಮಂಡಲದ ವತಿಯಿಂದ ಸೀಲ್ ಡೌನ್ ಪ್ರದೇಶದ ಮನೆಗಳಿಗೆ ತರಕಾರಿ ವಿತರಣೆ

ಬೆಳ್ತಂಗಡಿ: ರಾಜ್ಯ ಪ್ರಶಸ್ತಿ ವಿಜೇತ ಲಾಯಿಲ ಉತ್ಸಾಹಿ ಯುವಕ ಮಂಡಲ (ರಿ) ದ ವತಿಯಿಂದ ಕಂಟೋನ್ಮೆಂಟ್ ವಲಯ ಎಂದು ಗುರುತಿಸಲಾಗಿರುವ ಲಾಯಿಲ ಪಡ್ಲಾಡಿ ಪ್ರದೇಶದ ಎಲ್ಲಾ ಮನೆಗಳಿಗೆ ತರಕಾರಿ ಕಿಟ್ ಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ಚಂದ್ರಕಾಂತ , ಕಾರ್ಯದರ್ಶಿ ಹರ್ಷಿತ್ ನಿನ್ನಿಕಲ್ಲು , ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಏಣಿಂಜ, ಮಾಜಿ ತಾಲೂಕು ಪಂಚಾಯತ್ ಉಪಾಧ್ಯಕ್ಷ ಚಂದು ಎಲ್ , ಯುವಕ ಮಂಡಲದ ಪದಾಧಿಕಾರಿಗಳಾದ ಸಂದೇಶ್ ಎಲ್ , ಹರೀಶ್ ಎಲ್ ನೆನಪು , ರವಿಚಂದ್ರ , ಸೂರ್ಯಕಾಂತ್ , ಸುಧೀರ್ ಮೊದಲಾದವರು ಉಪಸ್ಥಿತರಿದ್ದರು.

error: Content is protected !!