ಬೆಳ್ತಂಗಡಿ: ಚಾರ್ಮಾಡಿ ಗ್ರಾಮದ ಸರ್ಕಾರಿ, ಹಿರಿಯ,ಪ್ರಾಥಮಿಕ.ಶಾಲೆ ಪರ್ಲಾಣಿ ಇಲ್ಲಿ ನೂತನವಾಗಿ ನಿರ್ಮಿಸಲಾದ ಶಾಲಾ ಕೊಠಡಿ “ವಿವೇಕ” ಇದರ ಉದ್ಘಾಟನಾ ಸಮಾರಂಭ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಚಾರ್ಮಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದಾ ಅಣಿಯೂರು ನೆರವೇರಿಸಿದರು.
ಅತಿಥಿಗಳಾಗಿ ಪ್ರಕಾಶ್ ಹೊಸಮಠ, ಕೃಷ್ಣ ರಾವ್ ಕೋಡಿತ್ತಿಲ್ , ಪ್ರತಿಭಾ ಕೆವುಟಾಜೆ, ಹರೀಶ್ ಎತ್ತರಗುಡ್ಡೆ, ಸದಾಶಿವ ಕೆವುಟಾಜೆ ಭಾಗವಹಿಸಿದರು ಕಾರ್ಯಕ್ರಮದಲ್ಲಿ ಪೋಷಕರು ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಶಾಲಾ ಶಿಕ್ಷಕರು ಮಕ್ಕಳು ಊರವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ನಿರೂಪಣೆಯನ್ನು ಶಾಲಾ ಮುಖ್ಯ ಶಿಕ್ಷಕ ತಮ್ಮಯ್ಯ ನೆರೆವೇರಿಸಿದರು.