ಮೈಪಾಲ ಸೇತುವೆ ಕಾಮಗಾರಿ ವೀಕ್ಷಿಸಿದ ಶಾಸಕ ಹರೀಶ್ ಪೂಂಜ: ಸಂಪರ್ಕ ಸೇತುವೆ, ಸಂತಸ ಹಂಚಿಕೊಂಡ ಬಂದಾರು-ಕೊಕ್ಕಡ ಗ್ರಾಮಸ್ಥರು:

 

 

 

ಬೆಳ್ತಂಗಡಿ : ಬಂದಾರು ಮತ್ತು ಪಟ್ರಮೆ-ಕೊಕ್ಕಡ ಗ್ರಾಮಸ್ಥರ ಹಲವು ವರ್ಷಗಳ ಕನಸಾಗಿದ್ದ ನೂತನ
ಮೈಪಾಲ ಸೇತುವೆ ಮತ್ತು ಅಣೆಕಟ್ಟು ಕಾಮಗಾರಿಯನ್ನು
ಶಾಸಕ ಹರೀಶ್ ಪೂಂಜ ಅವರು ಶನಿವಾರ ಸ್ಥಳೀಯ ಪ್ರಮುಖರ ಜೊತೆ ವೀಕ್ಷಣೆ ಮಾಡಿದರು.
ಬೆಳ್ತಂಗಡಿ ತಾಲೂಕಿನ ಕೊಕ್ಕಡ-
ಬಂದಾರು ಮತ್ತು ಪಟ್ರಮೆ- ಗ್ರಾಮಗಳನ್ನು ಸಂಪರ್ಕಿಸುವ
ಮೈಪಾಲ ಸೇತುವೆ ಮತ್ತು ಕಿಂಡಿ ಅಣೆಕಟ್ಟು ಕಾಮಗಾರಿಯು 72 ಲಕ್ಷ ರೂ. ವೆಚ್ಚದಲ್ಲಿ ನಡೆಯುತ್ತಿದ್ದು ಶಾಸಕರ ಕಳೆದ ಅವಧಿಯಲ್ಲಿ
ಹಾಗೂ ಬಂದಾರು ಗ್ರಾಮವನ್ನು ಸಂಪರ್ಕಿಸಲು ಕೊಕ್ಕಡ ಗ್ರಾಮದ ಮೈಪಾಲ ಎಂಬಲ್ಲಿ ರೂ.72 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಮೈಪಾಲ ಸೇತುವೆ ಸಹಿತ ಕಿಂಡಿ ಆಣೆಕಟ್ಟು ಕಾಮಗಾರಿಯನ್ನು ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ವೀಕ್ಷಣೆ ಮಾಡಿದರು.ಈ ಸಂದರ್ಭದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ,ಕೊಕ್ಕಡ ಪಂಚಾಯತ್ ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಯೋಗೀಶ್ ಆಳಂಬಿಲ, ಕೊಕ್ಕಡ ಪಂಚಾಯತ್ ಸದಸ್ಯರಾದ ವಿಶ್ವನಾಥ, ಬಿಜೆಪಿ ಮಂಡಲ ಎಸ್. ಟಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ವಿಠಲ ಕುರ್ಲೆ,ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಮಹಾಬಲ ಗೌಡ ಬಂದಾರು, ಬೆಳ್ತಂಗಡಿ ಎ.ಪಿ.ಎಮ್.ಸಿ ಮಾಜಿ ನಿರ್ದೇಶಕರಾದ ಹೊನ್ನಪ್ಪ ಗೌಡ ಸೋಣಕುಮೇರು ಮತ್ತಿತರರು ಇದ್ದರು.

error: Content is protected !!