ಸಿಡಿಲು ಬಡಿದು ಹಾನಿ: ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ ) ಸಹಾಯ ಹಸ್ತ

ಬೆಳ್ತಂಗಡಿ: ಸಿಡಿಲು ಬಡಿದು ಹಾನಿಗೊಳಗಾದ ನಿಡ್ಲೆ ಗ್ರಾಮದ ಗಾಣಂತಿ ಮನೆ ರಾಜೇಂದ್ರ ಗೌಡ ಅವರ ಮನೆಗೆ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ (ರಿ) ತಂಡ ಭೇಟಿ ನೀಡಿದೆ.

ಈ ಸಂದರ್ಭದಲ್ಲಿ ರಾಜೇಂದ್ರ ಗೌಡ ಅವರಿಗೆ ಟ್ರಸ್ಟಿನ ವತಿಯಿಂದ ಸಾಂತ್ವನ ತಿಳಿಸಿ ಸಹಾಯಹಸ್ತ ನೀಡಲಾಯಿತು.

ಈ ವೇಳೆ ಟ್ರಸ್ಟಿಗಳಾದ ಶ್ರೀನಿವಾಸ ಗೌಡ ಬೆಳಾಲು, ವಿಜಯ ಗೌಡ ವೇಣೂರು, ಭರತ್ ಬಂಗಾಡಿ, ಸೂರಜ್ ಗೌಡ ವಳಂಬ್ರ, ವಸಂತ ಗೌಡ ಮರಕಡ, ನವೀನ್ ಬಿ.ಕೆ, ದಿನೇಶ್ ಕೊಯ್ಯುರು, ರಾಜೇಶ್ ತ್ರಿಶುಲ್, ಸತೀಶ್ ಬೆದ್ರಬೆಟ್ಟು, ನಿಡ್ಲೆ ಸಮಿತಿಯ ಸದಸ್ಯರಾದ ಗಿರೀಶ್ ಬಾರೆಗುಡ್ಡೆ ಜೊತೆಗಿದ್ದರು.

error: Content is protected !!