ಪಂಜುರ್ಲಿ ದೈವದ ವೇಷ ಧರಿಸಿ ಅಸಭ್ಯ ನೃತ್ಯ: ವೇಷಧಾರಿಯ ವಿರುದ್ಧ ಜೈ ತುಳುನಾಡು ಸಂಘಟನೆ ದೂರು

ಬೆಂಗಳೂರು: ಪಂಜುರ್ಲಿ ದೈವದ ವೇಷ ಧರಿಸಿ ಅಸಭ್ಯ ನೃತ್ಯ ಮಾಡಿದ್ದಾರೆ ಎಂದು ಆರೋಪಿಸಿ ಜೈ ತುಳುನಾಡು ಸಂಘಟನೆ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ.

ಪಂಜುರ್ಲಿ ದೈವದ ನರ್ತನೆಯ ಕಟ್ಟುಪಾಡು ಅರಿಯದೇ ನೃತ್ಯ ಮಾಡುವಂತಿಲ್ಲ. ಆದರೆ ಗಣೇಶ ಹಬ್ಬದ ವೇಳೆ ದೇವರ ಮುಂದೆ ಮತ್ತಿಕೆರೆ ಯಲ್ಲಮ್ಮ ದೇವಸ್ಥಾನ ಅರ್ಚಕರಾದ ವೆಂಕಟೇಶ್ ಅವರು ದೈವದ ವೇಷ ಧರಿಸಿ ಅಸಭ್ಯವಾಗಿ ನೃತ್ಯ ಮಾಡಿದ್ದಾರೆ. ಈ ಮೂಲಕ ಕರಾವಳಿ ಭಾಗದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಜೊತೆಗೆ ಅವರ ವಿರುದ್ಧ ಕಾನೂನು ಕ್ರಮಕ್ಕೆ ಸಂಘಟನೆಯು ಆಗ್ರಹಿಸಿದೆ.

error: Content is protected !!