ಬೆಳ್ತಂಗಡಿ : ವನ್ಯಜೀವಿ ವಿಭಾಗದ ಆರ್.ಎಫ್.ಓ ಸ್ವಾತಿ.ಎಲ್ ವರ್ಗಾವಣೆ:ನೂತನ ಆರ್.ಎಫ್.ಓ ಆಗಿ ವಿ.ಶರ್ಮಿಷ್ಠ ನೇಮಕ

 

ಬೆಳ್ತಂಗಡಿ : ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್.ಎಫ್.ಓ ಆಗಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸ್ವಾತಿ.ಎಲ್ ಅವರನ್ನು ಕೊಪ್ಪಲ ಜಿಲ್ಲೆಯ ಮುನಿರಾಬಾದ್ ವಲಯದ ಅರಣ್ಯಾಧಿಕಾರಿಯಾಗಿ ಸರಕಾರ ವರ್ಗಾವಣೆ ಮಾಡಿದೆ.ತೆರವಾದ ಇವರ ಸ್ಥಾನಕ್ಕೆ ಚಿಕ್ಕಮಗಳೂರು ಜಿಲ್ಲೆಯ ಕಾರ್ಯ ಯೋಜನೆ ವಲಯ ಅರಣ್ಯಾಧಿಕಾರಿಯಾದ ವಿ.ಶರ್ಮಿಷ್ಠ ಅವರನ್ನು ಸರಕಾರ ನೇಮಕ ಮಾಡಿದ್ದು ಆ.6 ರಂದು ಇವರು ಬೆಳ್ತಂಗಡಿ ವನ್ಯಜೀವಿ ವಿಭಾಗದ ಆರ್.ಎಫ್.ಓ ಆಗಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ.

error: Content is protected !!