ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣ: ಕಾನ್ಫರೆನ್ಸ್ ಮೂಲಕ ವಿಚಾರಧಾರೆ ಮಂಡಿಸಿದ ಡಾ. ಡಿ. ವೀರೇಂದ್ರ ಹೆಗ್ಗಡೆ:

 

 

ಬೆಳ್ತಂಗಡಿ : ಭಾರತದ ಸಿವಿಲ್ 20 ಮತ್ತು ಯೂತ್ 20 ವಕಿರ್ಂಗ್ ಗ್ರೂಪ್‍ಗಳ ಉ20 ಅಧ್ಯಕ್ಷತೆಯ ಭಾಗವಾಗಿ ಆಯೋಜಿಸಲಾದ ಚೇಂಜ್‍ಮೇಕರ್20 ಶೃಂಗಸಭೆಯು 60 ಕ್ಕೂ ಹೆಚ್ಚು ದೇಶಗಳ ಯುವ ಬದಲಾವಣೆ ಮಾಡುವವರು, ನಾಯಕರು ಮತ್ತು ಪ್ರಭಾವಿಗಳಿಗೆ ಸಹಕರಿಸಲು, ಆವಿಷ್ಕರಿಸಲು ಮತ್ತು ಸುಸ್ಥಿರ ಪರಿಹಾರಗಳನ್ನು ಚಾಲನೆ ಮಾಡಲು ಜಾಗತಿಕ ವೇದಿಕೆಯಾಗಿದ್ದು ಈ ವೇದಿಕೆಯ ಮೂಲಕ ಆಯೋಜಿಸಲಾಗಿದ್ದ ಲಿಂಗ ಸಮಾನತೆ ಮತ್ತು ಮಹಿಳೆಯರ ಸಬಲೀಕರಣದ ವಿಷಯದ ಕುರಿತು ಡಿ. ವೀರೇಂದ್ರ ಹೆಗ್ಗಡೆಯವರು ಆ16 ಸಂಜೆ 6.00 ರಿಂದ 6.45 ರ ವರೆಗೆ ವಿಸ್ಕ್ರತವಾಗಿ ವೀಡಿಯೋ ಕಾನ್ಪರೆನ್ಸ್ ಮೂಲಕ ತಮ್ಮ ವಿಚಾರಧಾರೆಯನ್ನು ಮಂಡಿಸಿದರು. ಸಾವಿರಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆಸಕ್ತರು ಈ ವೀಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ಪ್ರಯೋಜನ ಪಡೆದುಕೊಂಡರು.
ಭಾಷಣದ ನಂತರದ ಪ್ರಶ್ನೋತ್ತರದಲ್ಲಿ ಬಹಳಷ್ಟು ಆಸಕ್ತರು ಹೆಗ್ಗಡೆಯವರಲ್ಲಿ ಮಹಿಳೆಯ ಸಬಲೀಕರಣದ ಕುರಿತು ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರವನ್ನು  ನೀಡಿದರು.

ಎಲ್ಲಾ ರಂಗಗಳಲ್ಲಿ ಮಹಿಳೆಯರನ್ನು ಸಬಲೀಕರಣಗೊಳಿಸುವುದು ಪ್ರಸ್ತುತ ಆದ್ಯತೆಯಾಗಿರಬೇಕು ಎಂದು ನಾನು ಹೇಳಲು ಬಯಸುತ್ತೇನೆ. ಲಿಂಗ ಸಮಾನತೆಯು ಸಮಾನತೆಯ ಸಮಾಜವನ್ನು ಸೃಷ್ಟಿಸುವುದು ಮಾತ್ರವಲ್ಲದೆ ದೇಶವು ಜಾಗತಿಕವಾಗಿ ಎದ್ದು ಕಾಣಲು ಸಹಾಯ ಮಾಡುತ್ತದೆ ಎಂದು ನಾನು ದೃಢವಾಗಿ ನಂಬುತ್ತೇನೆ

ಡಿ. ವೀರೇಂದ್ರ ಹೆಗ್ಗಡೆಯವರು

error: Content is protected !!