ಕೊಯ್ಯುರು: ಹಲವಾರು ಮಂದಿ ಬಿ ಜೆ ಪಿ ತೊರೆದು ಕಾಂಗ್ರೇಸ್ ಸೇರ್ಪಡೆ:

 

 

ಬೆಳ್ತಂಗಡಿ: ಕೊಯ್ಯೂರು ಗ್ರಾಮದ ಆದೂರ್ ಪೇರಾಲ್ ನಲ್ಲಿ ನಡೆದ ಬೆಳ್ತಂಗಡಿ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ರಕ್ಷಿತ್ ಶಿವರಾಮ್ ರವರ ಚುನಾವಣಾ ಪ್ರಚಾರ ಸಂಧರ್ಭದಲ್ಲಿ ಹಲವಾರು ಮಂದಿ ಬಿ ಜೆ ಪಿ ತೊರೆದು ಕಾಂಗ್ರೇಸ್ ಪಕ್ಷವನ್ನು ಸೇರಿದರು.

ಕೊಯ್ಯೂರು ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ನಾರಾಯಣ ನೀರಾಕಜೆ, ಬಿ ಜೆ ಪಿ ಯ ಸಕ್ರಿಯ ಕಾರ್ಯಕರ್ತರಾದ ಮೋನಪ್ಪ ಸಾಲಿಯಾನ್ ಬಜಿಲ, ರವೀಂದ್ರ ಪೂಜಾರಿ ಬಜಿಲ, ಲೋಹಿತ್ ಉಮಿಯ, ಸುರೇಶ ಉಮಿಯ, ಯೋಗೀಶ್ ಪದ್ಮುಂಜ, ದೇಜಪ್ಪ ನಿರಾರಿ, ರವೀಂದ್ರ ಆಚಾರ್ಯ ಕೊಯ್ಯುರ್ ಮುಂತಾದವರು ಕಾಂಗ್ರೇಸ್ ಪಕ್ಷವನ್ನು ಸೇರ್ಪಡೆಗೊಂಡರು.

ಈ ಸಂಧರ್ಭದಲ್ಲಿ ಮಾಜಿ ಶಾಸಕ ಕೆ. ವಸಂತ ಬಂಗೇರ, ಅಭ್ಯರ್ಥಿ ರಕ್ಷಿತ್ ಶಿವರಾಮ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಶೈಲೇಶ್ ಕುಮಾರ್, ಮಾಜಿ ಅಧ್ಯಕ್ಷರಾದ ರಾಜಶೇಖರ ಅಜ್ರಿ, ಜಿಲ್ಲಾ ಅಲ್ಪಸಂಖ್ಯಾತ ಕಾಂಗ್ರೇಸ್ ಅಧ್ಯಕ್ಷ ಸಾಹುಲ್ ಹಮೀದ್, ಪ್ರವೀಣ್ ವಿ ಜಿ ಮುಂತಾದವರು ಉಪಸ್ಥಿತರಿದ್ದರು

error: Content is protected !!